ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸ್ಥಳದಲ್ಲಿ ಯುವಕ ಸಾವು
(CHIKKAMAGALURU): ಕುಟುಂಬಸ್ಥರ ಮನೆಗೆ ಹೋಗಿ ಬರುತ್ತಿದ್ದ ವೇಳೆ ಚಿಕ್ಕಮಗಳೂರು ಜಿಲ್ಲೆಯ ಹಿರೇಗದ್ದೆ ಸಮೀಪ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೈಕ್ ನಲ್ಲಿ ಸವಾರಿಸುತ್ತಿದ್ದ ಯುವಕ ಸಂಜಯ್ ಆಚಾರ್ಯ (23) ಬಾಳೆಹೊನ್ನೂರು ಪಟ್ಟಣದ ರೇಣುಕನಗರದಲ್ಲಿ ವಾಸಿಸುವ ಯೋಗೇಶ್ ಆಚಾರ್ಯ ರವರ ಮಗನಾಗಿದ್ದು ಹಿರೇಗದ್ದೆ ಸಮೀಪ ಕುಟುಂಬಸ್ಥರ ಮನೆಗೆ ಹೋಗಿ ಬರುವ ವೇಳೆ ರಸ್ತೆಯ ತಿರುವಿನಲ್ಲಿ ಕಾರು ಹಾಗೂ ಬೈಕ್ ನಾ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿ ಸವಾರಿಸುತ್ತಿದ್ದ ಯುವಕ ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಕ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ.