ಯುವಕ ಹೋಟೆಲ್ ನಲ್ಲಿ ಕೆಲಸ ಮಾಡಿದ ಹಣ ಕೇಳಿದಕ್ಕೆ ಕೈ, ಕಾಲು ಕಟ್ಟಿ ತಳಿತ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಯುವಕನಿಗೆ ಬಾಕಿ ಇರುವ ಹಣ ಕೊಡುವುದಾಗಿ ಭರವಸೆ ನೀಡಿ ಮದ್ಯ ಸೇವನೆ ಮಾಡಿಸಿ ಆರು ಜನರ ಯುವಕರಿಂದ ರಾಡ್, ಬೆಲ್ಟ್ ನಿಂದಾ ಯುವಕನಿಗೆ ತಳಿಸಲಾಗಿದ್ದೆ.
ಹೊಟೇಲ್ ನಲ್ಲಿ ಕೆಲಸ ಮಾಡಿದ್ದ ಸತೀಶ್ ಬಾಕಿ ಸಂಬಳವನ್ನು ಫೋನ್ ಮೂಲಕ ಹೋಟೆಲ್ ಮಾಲೀಕನಿಗೆ ಬಾಕಿ ಇರುವ ಹಣ ನೀಡುವಂತೆ ಕೇಳಿದ್ದು, ಯುವಕರ ಗುಂಪೊಂದು ಮದ್ಯ ಕುಡಿಸಿ, ಕೈ ಕಾಲು ಕಟ್ಟಿ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಆರು ಜನರಿಂದ ರಾಡ್, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿ ವೀಡಿಯೋ ಫೋಟೋಸ್ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ, ಸುನೀಲ್ ಕಟ್ಟೆಹಕ್ಲು, ಮಹೇಶ್, ಸಿರಿಲ್, ಸುನೀಲ್, ವಿಠಲ್, ಮಂಜು ಎಂಬುವವರ ವಿರುದ್ಧ ಸತೀಶ್ ದೂರು ದಾಖಲು ಮಾಡಿದ್ದಾರೆ. ಕಾಡಲ್ಲಿ ಬಟ್ಟೆ ಬಿಚ್ಚಿ, ದೊಣ್ಣೆ, ರಾಡ್, ಬೆಲ್ಟ್ ನಿಂದ ಹೊಡೆದಿದ್ದಾರೆ. ಅಮಾನವೀಯ ಘಟನೆ ಕೊಪ್ಪ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.