ನ್ಯೂಸ್ಶಿವಮೊಗ್ಗ

ಸಾಗರದ ಗೋಪಾಲಗೌಡ ನಗರದಲ್ಲಿ ಯುವತಿ ಯೊಬ್ಬಳು ರೈಲಿಗೆ ಸಲುಕಿ ಸಾವು.

ಸಾಗರದ ಗೋಪಾಲಗೌಡ ನಗರದಲ್ಲಿ ಯುವತಿ ಯೊಬ್ಬಳು ರೈಲಿಗೆ ಸಲುಕಿ ಸಾವು.


(SHIVAMOGA): ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ರೈಲ್ವೆ ಗೇಟ್ ಬಳಿ ವಿದ್ಯಾರ್ಥಿನಿ ಒಬ್ಬಳು ಸಾವಿಗೆ ಶರಣಾಗಿದ್ದಾಳೆ. ಮೈಸೂರು ಹಾಗೂ ತಾಳಗುಪ್ಪ ರೈಲಿಗೆ ವಿದ್ಯಾರ್ಥಿನಿ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಸಾಗರದ ಗೋಪಾಲಗೌಡ ನಗರದ ಕೆ. ಎಸ್.ಆರ್. ಟಿ.ಸಿ ಉದ್ಯೋಗಿ ಶರಣಯ್ಯ ಅವರ ಮಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭೂಮಿಕಾ 18ವರ್ಷ ಎಂದು ತಿಳಿದು ಬಂದಿದೆ. ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಇನ್ನೂ ಮಾಹಿತಿ ವಿಚಾರಣೆ ನಡೆದ ನಂತರ ಬರಬೇಕಾಗಿದೆ.

ಸಾಗರ ಕಾಲೇಜೋಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ತಿಳಿದುಬಂದಿಲ್ಲ ಅಪ್ರಾಪ್ತೆಯಾಗಿರುವ ಕಾರಣಕ್ಕೆ ವಿದ್ಯಾರ್ಥಿನಿಯ ವಿವರ ನೀಡಲಾಗುತ್ತಿಲ್ಲ. ಈ ಸಂಬಂಧ ಸಾಗರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code