ದ್ವಿಚಕ್ರ ವಾಹನದಿಂದ ಯುವಕ ಬಿದ್ದು ಸಾವು.
(KOLARA): ಬಂಗಾರಪೇಟೆ :ತಾಲೂಕಿನ ಕಾರಹಳ್ಳಿ ಗುಡಿಸಲು ಬಳಿ ದ್ವಿಚಕ್ರವಾಹನದಿಂದ ಯುವಕ ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ.
ಮೃತದುರ್ದೈವಿ ವಿಕ್ರಂ 20 ವರ್ಷ ಮೂಲತಹ ಪಟ್ಟಣದ ಸಂಜಯ್ ಗಾಂಧಿನಗರದವರೆಂದು ತಿಳಿದು ಬಂದಿದೆ. ದ್ವಿಚಕ್ರ ವಾಹನದಲ್ಲಿ ಹೋಗುವ ಸಮಯದಲ್ಲಿ ತಾಲೂಕಿನ ಕಾರಹಳ್ಳಿ ಗುಡಿಸಿಲು ಬಳಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಸಾವನಪ್ಪಿದ್ದಾನೆ .
ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ ವಿಷ್ಣು ಕೋಲಾರ
ಬ್ರಹ್ಮಾಂಡ ಗುರೂಜಿ – ಜನಪ್ರಿಯತೆ – ಟಿವಿ ಮಾಧ್ಯಮಗಳು – ಸತ್ಯ ಮಿಥ್ಯದ ಹುಡುಕಾಟ…….