ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಪಿಎಸ್ಐ ನಾಗರಾಜ್
(SHIVAMOGA): ಸೊರಬ: ಯಾವುದೇ ಕ್ರೀಡಾ ಸ್ಪರ್ಧೆಯಲ್ಲಿ ಆಡುವ ಆಟಗಾರ ಅದನ್ನು ಕ್ರೀಡಾ ಮನೋಭಾವದಿಂದ ಆಡಿದಾಗ ಮಾತ್ರ ಗೆಲುವು, ಆಟಗಾರರಲ್ಲಿ ಸ್ನೇಹ ಬಂಧ ಉಳಿಯಲು ಸಾಧ್ಯ ಎಂದು ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಹೇಳಿದರು.
ಪಟ್ಟಣದ ರಾಜೀವ್ ನಗರದಲ್ಲಿ ಆಕ್ಷನ್ ಪ್ರಿನ್ಸ್ ಹೋರಿ ಮಾಲೀಕರು ಮತ್ತು ಅಭಿಮಾನಿ ಬಳಗ ರಾಜೀವ ನಗರ ಇವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದ ಅಭಿವೃದ್ಧಿಯ ಸಹಾಯಾರ್ಥ ಕಬಡ್ಡಿ ಆಟಗಾರ ಸಂತು ಸವಿನೆನಪಿಗಾಗಿ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಕ್ರೀಡೆಗಳು ಪ್ರೀತಿಯ ಜೊತೆ ಪರಸ್ಪರ ಶಾಂತಿ ಸೌಹಾರ್ದತೆಯನ್ನು ಸದೃಢಗೊಳಿಸುತ್ತವೆ ಎಂದ ಅವರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಕ್ರೀಡಾಪಟುಗಳು ಭಾಗವಹಿಸುವಂತೆ ಕರೆ ನೀಡಿದರು.
ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಕುಮಟಾ ತಂಡ ಪ್ರಥಮ, ರಿಪ್ಪನಪೇಟೆ ತಂಡ ದ್ವಿತೀಯ ಹಾಗೂ ನಡಹಳ್ಳಿ ತಂಡ ತೃತೀಯ ಸ್ಥಾನ ಪಡೆದವು.
ಈ ಸಂದರ್ಭದಲ್ಲಿ ಆಯೋಜಕರಾದ ಸಚಿನ್, ಸುಭಾಷ್, ರಂಗನಾಥ ಮೊಗವೀರ, ರಾಘವೇಂದ್ರ ಆಚಾರ್, ಗುರು ಗುಂಜನೂರು, ಮಂಜುನಾಥ ಭಂಡಾರಿ, ಹರೀಶ್, ಪ್ರಪುಲ್, ಮಹೇಶ್ ಖಾರ್ವಿ, ಟಿಂಬರ್ ಚಂದ್ರು, ಮುಖ್ಯ ಶಿಕ್ಷಕ ಮಂಜುನಾಥ, ಖಲೀಲ್, ವಿನುತ್ ಭೋಗೇಶ್, ಇಂಧೂದರ ಹೊಳೆಲಿಂಗಪ್ಪ, ಅವಿನಾಶ್, ಭರತ್, ಮಂಜು, ಆಸ್ಕರ್ ಸುದರ್ಶನ್, ಯುವರಾಜ್, ಹರೀಶ್, ಕಿರಣ್, ಸುಭಾಷ್ ಆಚಾರ್ ಮತ್ತಿತರರಿದ್ದರು.
ವರದಿ: ಸಂದೀಪ ಯು.ಎಲ್.,ವೆಸ್ಟರ್ನ್ ಘಾಟ್ ನ್ಯೂಸ್,ಸೊರಬ