ಶೃಂಗೇರಿ ತಾಲ್ಲೂಕಿನ ವಿಜ್ಞಾನಕೇಂದ್ರದ ಕಾರ್ಯಚಟುವಟಿಕೆಗಳು ಸದಾ ಉಪಯುಕ್ತ : ಸಂತೋಷಶೆಟ್ಟಿ
ಶೃಂಗೇರಿ ತಾಲ್ಲೂಕು ವಿಜ್ಞಾನ ಕೇಂದ್ರ ಅಸ್ತಿತ್ವಕ್ಕೆ ಬಂದಲ್ಲಿಂದ ಒಂದು ವರ್ಷದಲ್ಲಿ ಚಂದ್ರಯಾನದ ಬಗ್ಗೆ ಯುವ ವಿಜ್ಞಾನಿ ಆದಿತ್ಯರವರಿಂದ ಉಪನ್ಯಾಸ ಥಟ್ ಅಂತ ಹೇಳಿಯ ಖ್ಯಾತಿಯ ಡಾ.ನಾ.ಸೋಮೇಶ್ವರರವರಿಂದ ಮೌಢ್ಯ ಮತ್ತು ನಂಬಿಕೆ ಬಗ್ಗೆ ಉಪನ್ಯಾಸ ಮಕ್ಕಳಲ್ಲಿ ಮಾಧ್ಯಮಗಳ ಬಳಕೆ ಬಗ್ಗೆ ಮನೋಶಾಸ್ತ್ರಜ್ಞೆ ಕು.ಹರ್ಷೀತಾ ಮಂಗಳೂರು ಇವರಿಂದ ಸಂವಾದ ಗಂಡಗಟ್ಟ ಶಾಲೆಯಲ್ಲಿ ಮತ್ತು ಇದೀಗ ಕೆ.ಪಿ.ಎಸ್.ಬೇಗಾರಿನಲ್ಲಿ ವಿಜ್ಞಾನ ರಂಜನೆ ಮನೋರಂಜನೆ ಎಂಬ ಪ್ರಯೋಗಗಳು ಪ್ರದರ್ಶನ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹೀಗೆ ನಿರಂತರ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸುತ್ತಿದೆ ಎಂದರು. ಅವರು ಕೆ.ಪಿ.ಎಸ್.ಬೇಗಾರಿನಲ್ಲಿ ನಡೆದ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.
ವಿಜ್ಞಾನಕೇಂದ್ರದ ಗೌರವಾಧ್ಯಕ್ಷ ಗುರುಮೂರ್ತಿ ನೇತೃತ್ವದಲ್ಲಿ ಸುಮಾರು 1.30ಗಂಟೆಗಳ ಕಾಲ ಪ್ರಯೋಗ ಪ್ರದರ್ಶನ ನಡೆಸಿಕೊಟ್ಟರು. ವಿಜ್ಞಾನ ಕೇಂದ್ರದಿಂದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ವಿಜ್ಞಾನ ಕೇಂದ್ರ ದ ಅಧ್ಯಕ್ಷ ಗಣಿತವನ ಶಿವಶಂಕರ್ ವಹಿಸಿದ್ದು ವಿಜ್ಞಾನ ಕೇಂದ್ರ ಚಟುವಟಿಕೆಯುಕ್ತವಾಗಿರಲು ಕಾರಣವಾದ ಸಂಘಟನೆಯ ಎಲ್ಲರಿಗೂ ಧನ್ಯವಾದ ತಿಳಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ರೂಪಿಸುವ ಆಶಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಖಜಾಂಚಿ ಶ್ರೀಮತಿ ದೀಪಾ ಸದಸ್ಯೆ ಸೌಮ್ಯ ಸದಸ್ಯ ನಾ.ಸುರೇಶ್ ಮುಖ್ಯಶಿಕ್ಷಕ ಪುಟ್ಟಪ್ಪ ಉಪಸ್ಥಿತರಿದ್ದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು ಮಕ್ಕಳಿಗೆ ಕಾರ್ಯಕ್ರಮ ಬಹಳ ರಂಜನೀಯವಾಗಿ ಮೆಚ್ಚುಗೆಗೆ ಪಾತ್ರವಾಯಿತು.