ಗಮನ ಸೆಳೆದ ಆದಿ ಶಂಕರರು.. ಎರಡನೇ ತರಗತಿ ವಿದ್ಯಾರ್ಥಿನಿ ಪ್ರಥಮ ಸ್ಥಾನ
(ಕೊಪ್ಪ): ನಾರ್ವೆ ಕ್ಲಸ್ಟರ್ ಮಟ್ಟದ 2023-24 ನೇ ಸಾಲಿನ ಪ್ರತಿಭಾಕಾರಂಜಿ ಕಾರ್ಯಕ್ರಮ ಸ,ಕಿ,ಪ್ರಾಥಮಿಕ ಶಾಲೆ ಬೆಳಗೊಳದಲ್ಲಿ ನಡೆದಿದ್ದು, ಛದ್ಮವೇಷ ಸ್ಪರ್ಧೆಯಲ್ಲಿ, ಎಲ್ ಪಿ ಎಸ್ ವಿಭಾಗದಲ್ಲಿ ಬೆಳಗೊಳ ಶಾಲೆಯ ಎರಡನೇ ತರಗತಿಯ ವಿಧ್ಯಾರ್ಥಿನಿ ಕುಮಾರಿ ಆದ್ವಿ ಬಿ.ಹೆಚ್ ರವರು ಆದಿಶಂಕರಾಚಾರ್ಯರ ವೇಷ ಧರಿಸಿ ಗಮನ ಸೆಳೆದು, ಪ್ರಥಮ ಸ್ಥಾನ ಪಡೆದು ತಾಲ್ಲೂಕು ಹಂತಕ್ಕೆ ಆಯ್ಕೆಯಾದರು. ವಿಧ್ಯಾರ್ಥಿನಿ ಬೆಳಗೊಳದ ಹರೀಶ್ ಬಿಎಂ ಮತ್ತು ಸುನೀತ ರವರ ದಂಪತಿಗಳ ಪುತ್ರಿ ಯಾಗಿದ್ದು, ಬೆಳಗೊಳ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ, ಸಹ ಶಿಕ್ಷಕ ನಾಗೇಶ್, ರವರು ಅಭಿನಂದಿಸಿದರು.