ನ್ಯೂಸ್ಶಿವಮೊಗ್ಗ

ಕೃಷಿ ಪರಿಸರ ಸ್ನೇಹಿ ಆಗಿರಬೇಕು ಹೊರತು ವಿರೋದಿಯಲ್ಲ

ಕೃಷಿ ಪರಿಸರ ಸ್ನೇಹಿ ಆಗಿರಬೇಕು ಹೊರತು ವಿರೋದಿಯಲ್ಲ

ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ 12ನೇ ವರ್ಷದ ಸಂಸ್ಥಾಪನ ದಿನಾಚರಣೆ..

(SHIVAMOGA): ಆನಂದಪುರ :ನಮ್ಮ ಪಾರಂಪಿಕ ಕೃಷಿ ನಿಸರ್ಗ ವಿರೋಧಿಯಾಗದ ಹಾಗೂ ನಿಸರ್ಗಕ್ಕೆ ಪೂರಕವಾಗಿ ಕಟ್ಟಿಕೊಂಡು ಬಂದಂತಹ ಕೃಷಿ ಸಂಸ್ಕೃತಿ ನಮ್ಮದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಪ್ರೊ. ಎಸ್. ಜಿ. ಸಿದ್ದರಾಮಯ್ಯ ತಿಳಿಸಿದರು.

ಅವರು ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ 12ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ನಮ್ಮ ಆಧುನಿಕ ಕೃಷಿ ಪದ್ಧತಿ ಭೂಮಿಯ ಋತುಚಕ್ರಕ್ಕೆ ಮಾರಕವಾಗುತ್ತಿದೆ. ಮಲೆನಾಡುಗಳಲ್ಲಿ ಬೆಳೆಯುತ್ತಿದ್ದ ಬೆಳೆಗಳು ಬಯಲು ಸೀಮೆಗಳಲ್ಲಿ ಹಾಗೂ ಬಯಲು ಸೀಮೆ ಯಲ್ಲಿ ಬೆಳೆಯುವಂತಹ ಬೆಳೆ ಮಲೆನಾಡಲ್ಲಿ ಬೆಳೆಯುವ ಪರಿಸ್ಥಿತಿ ಎದುರಾಗಿದೆ.

ಅಧಿಕ ಇಳುವರಿ ಮೋಹಕ್ಕೆ ಔಷಧಿಗಳ ರೂಪದಲ್ಲಿ ವಿಷಯ ನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ನಮ್ಮ ಭೂಮಿಯ ಜೈವಿಕ ಗುಣಗಳು ನಾಶವಾಗುತ್ತಿದೆ. ಮುಂದಿನ ದಿನಗಳಲ್ಲಿ ಭೂಮಿ ಏನುಕ್ಕೂ ಬಾರದ ಸ್ಥಿತಿಗೆ ಹೋಗುತ್ತದೆ. ನಮ್ಮ ಕೃಷಿ ಪದ್ಧತಿ ಪರಿಸರ ಸ್ನೇಹಿಯಾಗಿರಬೇಕು ವಿರೋಧಿ ಯಾಗಿರಬಾರದು ಎಂದರು.

ಅಧ್ಯಕ್ಷತೆ ವಹಿಸಿದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್. ಸಿ. ಜಗದೀಶ್ ಮಾತನಾಡಿ ನಮ್ಮ ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚು ಮನ್ನಣೆ ಪಡೆದಿದೆ. ಅಕ್ಕಪಕ್ಕ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಬಂದು ಓದಲು ಬಯಸುತ್ತಿದ್ದಾರೆ. ಅಷ್ಟು ಪ್ರಬುದ್ಧವಾದ ಶಿಕ್ಷಣ ಇಲ್ಲಿ ರೂಪಿಸಲಾಗಿದೆ ಎಂದರು.

ಸಂಸ್ಥಾಪನ ದಿನಾಚರಣೆ ನಿಮಿತ್ತ
ಡಾ. ಕಾಂತರಾಜ್. ವೈ , ಡಾ.ವೀರಣ್ಣ , ಡಾ. ರುದ್ರೇಗೌಡ, ಹಾಗೂ ಶ್ರೀಮತಿ ಸುಜಾತ. ಕೆ  ರವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುಲ ಸಚಿವರು ಡಾ. ಕೆ.ಸಿ ಶಶಿಧರ್, ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಡಾ. ಪಿ. ಕೆ ಬಸವರಾಜ್, ಶಿಕ್ಷಣ ನಿರ್ದೇಶಕ ರಾದ ಡಾ. ಬಿ. ಹೆಮ್ಲಾ ನಾಯಕ್ ಹಾಗೂ ಇನ್ನಿತರ ವಿಜ್ಞಾನಿಗಳು ಹಾಗೂ ಸಂಶೋಧಕರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ವರದಿ: ಅಮಿತ್ ಆರ್

Leave a Reply

Your email address will not be published. Required fields are marked *

Scan the code