Politicsಕೋಲಾರನ್ಯೂಸ್

ಕ್ಷೇತ್ರದ ಸರ್ವತೋ ಮುಖ ಅಭಿವೃದ್ಧಿ, ಪಟ್ಟಣವನ್ನು ಮಾದರಿ ಹಾಗೂ ಸುಂದರ ನಗರವನ್ನು ಮಾಡಲು ಪಣತೊಟ್ಟಿರುವುದು.

ಕ್ಷೇತ್ರದ ಸರ್ವತೋ ಮುಖ ಅಭಿವೃದ್ಧಿ, ಪಟ್ಟಣವನ್ನು ಮಾದರಿ ಹಾಗೂ ಸುಂದರ ನಗರವನ್ನು ಮಾಡಲು ಪಣತೊಟ್ಟಿರುವುದು.

(KOLARA ಬಂಗಾರಪೇಟೆ :ಕ್ಷೇತ್ರದ ಸರ್ವತೋ ಮುಖ ಅಭಿವೃದ್ಧಿ, ಪಟ್ಟಣವನ್ನು ಮಾದರಿ ಹಾಗೂ ಸುಂದರ ನಗರವನ್ನು ಮಾಡಲು ಪಣತೊಟ್ಟಿರುವುದಾಗಿ ಶಾಸಕ ಎಸ್. ಎನ್‌.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದಲ್ಲಿ 15ನೇ ಹಣಕಾಸು, ಸ್ವಚ್ಚ ಭಾರತ್ ಸೇರಿ ವಿವಿಧ ಹಣಕಾಸು ಯೋಜನೆಯಲ್ಲಿ 5.85 ಕೋಟಿರೂಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದ ಅವರು,ಪಟ್ಟಣದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪಗಳು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಪುರಸಭೆ ವಾಹನಗಳ ಖರೀದಿ, ಸೇರಿದಂತೆ ಪಟ್ಟಣದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದರು,

17 ಕೋಟಿರೂಗಳ ವೆಚ್ಚದಲ್ಲಿ ಪಾರ್ಕ್‌ಗಳ ಅಭಿವೃದ್ಧಿ ಮಾಡಲಾಗುವುದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 6 ಕೋಟಿರೂಗಳು ಬಿಡುಗಡೆಯಾಗಿದೆ, ಒಟ್ಟಾರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 28
ಕೋಟಿರೂಗಳ ಅಭಿವೃದ್ಧಿ ಕಾಮಗಾರಿಗಳು ಬಿಡುಗಡೆ ಮಾಡಲಾಗಿದೆ ಎಂದರು, ಹಿಂದೂ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರಯಂತ್ರ ಖರಿದಿಸಲಾಗುವುದೆಂದರು. ಜೆಸಿಬಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.



ಒಟ್ಟಾರೆ ನಮ್ಮ ಕನಸು ಗುರಿ ಪಟ್ಟಣದಲ್ಲಿ ಮೂಲಭೂತ ಸೌಲಭ್ಯ ಒದಗಿಸುದೇ ಆಗಿದೆ, ಶ್ರೀ ಕೊದಂಡರಾಮಸ್ವಾಮಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು, ರಂಗಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಯರ್‌ಗೋಳ್ ನೀರು ಸರಭರಾಜಾಗುತ್ತಿದ್ದು, ಸಾರ್ವಜನಿಕರಿಗೆ ಭಯ ಬೇಡ ನೀರಿನ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳಲಾಗುವುದೆಂದರು.

ಈ ವೇಳೆ ಪುರಸಭೆ ಸದಸ್ಯರುಗಳಾದ ಶಂಶುದ್ದೀನ್‌ಬಾಬು, ಪರ್ಜಾನಾ ಸುಹೇಲ್, ಶಫಿ, ರತ್ನಮ್ಮ, ಗಂಗಮ್ಮ, ಪೊನ್ನಿ, ಗೋವಿಂದ, ಮಹದೇವ್, ಯುವರಾಜ್, ವೆಂಕಟೇಶ್, ಸಾಧಿಕ್, ರಾಕೇಶ್‌ಗೌಡ, ಪ್ರಶಾಂತ್, ಅರುಣ್, ಬಾಬುಲಾಲ್,ಗುತ್ತಿಗೆದಾರರಾದ ಜೀವನ್ ಮೊದಲಾದವರು ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code