ಚಿಕ್ಕಮಗಳೂರುನ್ಯೂಸ್

ಅದ್ದೂರಿಯಾಗಿ 75 ವರ್ಷಗಳ ಸಾರ್ಥಕ ಸಹಕಾರಿ ಸೇವೆಯ ಅಮೃತ ಮಹೋತ್ಸವ ಆಚರಿಸಲು ಸಿದ್ಧ

ಅದ್ದೂರಿಯಾಗಿ 75 ವರ್ಷಗಳ ಸಾರ್ಥಕ ಸಹಕಾರಿ ಸೇವೆಯ ಅಮೃತ ಮಹೋತ್ಸವ ಆಚರಿಸಲು ಸಿದ್ಧ

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, 75 ವರ್ಷಗಳ ಪೂರೈಸಿದ್ದು ಅಮೃತ ಮಹೋತ್ಸವ ಆಚರಿಸಲು ಸಜ್ಜುಗೊಂಡಿದೆ ಹೊನ್ನೂರ ಸಹಕಾರಿ ಸಂಭ್ರಮ ಆಹ್ವಾನ ಪತ್ರಿಕೆಯು ಬಿಡುಗಡೆ ಮಾಡಿ ಸುದ್ದಿಗೋಷ್ಠಿ ಕರೆದು ಕಾರ್ಯಕ್ರಮದ ದಿನಾಂಕವನ್ನು ತಿಳಿಸಿದ್ದಾರೆ.

ಹೊನ್ನೂರ ಸಹಕಾರಿ ಸಂಭ್ರಮ ಅಮೃತ ಮಹೋತ್ಸವ 2024 ದಿನಾಂಕ 28.10.2024 ಸೋಮವಾರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಬಾಳೆಹೊನ್ನೂರಿನ ಸಂಘದ ಪ್ರಧಾನ ಕಚೇರಿಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್ ಕಲ್ಮಕ್ಕಿ ರವರು ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಿ ನಂತರ ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ಸಹಕಾರಿ ಜಾಗೃತಿ ಜಾಥದೊಂದಿಗೆ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿನ ಅಮೃತ ಮಹೋತ್ಸವ ವೇದಿಕೆ ಕಾರ್ಯಕ್ರಮಕ್ಕೆ ತೆರಳುವ ಮೂಲಕ ನಾರಾಯಣ ಗುರು ಸಮುದಾಯ ಭವನದಲ್ಲಿ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ.

75ನೇ ವರ್ಷದ ಸಂಭ್ರಮಕ್ಕೆ ಸಚಿವರಾದ ಕೆ.ಜೆ ಜಾರ್ಜ್ ರವರು, ಸಂಸದರು, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಟಿ. ಡಿ ರಾಜೇಗೌಡರು ಆಗಮಿಸಲಿದ್ದಾರೆ. ಸೊಸೈಟಿ ಎಲ್ಲಾ ಕಾರ್ಯಧ್ಯಕ್ಷರು ಮತ್ತು ರೈತರು ಶೇರುದಾರರು ಹಾಗೂ ಬಾಳೆಹೊನ್ನೂರು ಜನರು ಸುತ್ತಮುತ್ತಲಿನ ಜನರು ಸಾರ್ವಜನಿಕರು ಎಲ್ಲರೂ ಆಗಮಿಸಲಿದ್ದಾರೆ. ಬಾಳೆಹೊನ್ನೂರುನಲ್ಲಿ ಬ್ಯಾಂಕ್ ಹುಟ್ಟುವ ಮೊದಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹುಟ್ಟಿ ಹೆಚ್ಚು ರೈತರಿಗೆ ಸಹಾಯವಾಗಿದೆ. ಎಂದು ಸಂಘದ ಅಧ್ಯಕ್ಷರು ಟಿ ಎಂ ಉಮೇಶ್ ಕಲ್ಮಕ್ಕಿ ತಿಳಿಸಿದರು.

1999 ರಲ್ಲಿ ಸುವರ್ಣ ಮಹೋತ್ಸವ ಆಚರಣೆ ಮಾಡಿರುವ ಸಂಘ ಷೇರುದಾರರು ಪೈಕಿ ಬೈರೇಗುಡ್ಡ ಅಬ್ದುಲ್ ಹಮೀದ್ ಗೌರವ ಕಾರ್ಯದರ್ಶಿಗಳಾಗಿ ಟಿ.ಎಂ ಉಮೇಶ್, ರುದ್ರಪ್ಪ ಗೌಡರು ಪ್ರಮುಖರದ ಜನರನ್ನು ಸೇರಿಸಿ ಬಾಳೆಹೊನ್ನೂರುನಲ್ಲಿ ಸಂಭ್ರಮಾಚರಣೆ ಮಾಡಿಕೊಂಡಿದೆ. ಬಾಳೆಹೊನ್ನೂರು, ಬನ್ನೂರು, ಮಾಗುಂಡಿ, ಕಾರೆಅಡ್ಲು, ಹಲಸೂರು, ಈ ಭಾಗಗಳಲ್ಲಿ ಸಾವಿರದ ಆರುನೂರು ಜನರು ಇರುವ ಸಂಘವಾಗಿದೆ. 10 ಕೋಟಿಗು ಹೆಚ್ಚು ವ್ಯವಹಾರ ನಡೆಯುವ ಸಂಘವಾಗಿದ್ದು ವಾಹನ ಸಾಲ, ವ್ಯಾಪಾರ ಸಾಲ, ಕೃಷಿ ಸಾಲ, ಕೃಷಿ ಉಪಕರಣಗಳು, ಗೊಬ್ಬರ ವ್ಯಾಪಾರ ಮಾಡುವಲ್ಲಿ ಮುಂದಾಗಿದೆ. 2005ನೇ ಸಾಲಿನಲ್ಲಿ ನಷ್ಟ ಹೊಂದಿದ ಸಂಘ ಸಂಸ್ಥೆಗಳನ್ನು ಮತ್ತೆ ಮೇಲೆತ್ತುವ ಕಾರ್ಯಕ್ಕೆ ಸಹಕಾರ ಸಂಘ ಮುಂದಾಗಿತ್ತು, ಲಾಭದಲ್ಲಿ ಇರುವ ಸಂಘವಾಗಿದ್ದು ಸ್ವಂತ ಶಕ್ತಿಯಿಂದ ಮೇಲೆ ಬಂದಿದೆ. ಒಟ್ಟು ನಾಲ್ಕು ವ್ಯಾಪಾರ ಮಳಿಗೆಗಳು ಸ್ವಂತ ಕಟ್ಟಡವನ್ನು ಹೊಂದಿವೆ, ಸಂಘದಲ್ಲಿ ಪಿಗ್ಮಿ ಕೂಡ 50 ಪೈಸೆಯಿಂದ ಪ್ರಾರಂಭಿಸಿ ಇದೀಗ ಹೆಚ್ಚು ಪಿಗ್ಮಿ ಕಲೆಕ್ಷನ್ ಮಾಡುವಲ್ಲಿ ಮುಂದಾಗಿದೆ ಎಂದು ಕೆ.ಟಿ ವೆಂಕಟೇಶ್ ರವರು ತಿಳಿಸಿದರು.

2,000 ದಿಂದ 100 ಕೋಟಿ ವ್ಯವಹಾರ ಮಾಡುವಲ್ಲಿ ಮುಂದಾಗಿದೆ ಈ ಸಂಸ್ಥೆಯನ್ನು ಇನ್ನು ಹೆಚ್ಚು ಬೆಳೆಸಬೇಕು ಸಂಸ್ಥೆಯು ಹೆಚ್ಚು ಉತ್ತಮವಾಗಿ ನಡೆಯಬೇಕು ಎಂದು 75 ವರ್ಷಗಳ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಸಂಘವು ಹೃದಯ ಭಾಗದಲ್ಲಿ ಇರುವ ಬಾಳೆಹೊನ್ನೂರಿನಲ್ಲಿ ಹೆಚ್ಚು ಬೆಳೆದಿದೆ ಮತ್ತು ರೈತರಿಗೆ ಸೇವೆಯನ್ನು ನಿರಂತರವಾಗಿ ನೀಡುತ್ತಿದೆ. ಆಲದ ಮರದ ರೀತಿಯಲ್ಲಿ ಬೆಳೆದು ಬಂದಿರುವ ಸಂಸ್ಥೆಯು ಮೊದಲು ಈ ಸಂಘದವರು ಮತ್ತು ಸಂಘ ಬೆಳೆಯಲು ಸಹಕಾರ ಮಾಡಿದೆ ಅಡಿಪಾಯ ಹಾಕಿದವರಿಗೆ ಧನ್ಯವಾದಗಳು ಹೇಳಿ ಅವರನ್ನು ಉಪಸ್ಥಿತರಿದ್ದ ಸಂಘದ ಸದಸ್ಯರು ನೆನೆದರು.

ಈ ಸಂದರ್ಭದಲ್ಲಿ ಉಮೇಶ್ ಕಲ್ಮಕ್ಕಿ, ಚಂದ್ರಶೇಖರ್, ಕೆಕೆ ವೆಂಕಟೇಶ್, ಕೆ ಟಿ ವೆಂಕಟೇಶ್, ಗೋವಿಂದೇಗೌಡ, ಹಿರಿಯಣ್ಣ, ರಾಜಪ್ಪ ಗೌಡ, ಸುಧಾ ಎಸ್, ಅರುಣೇಶ್ ಎಂ ಎಸ್, ಎಂ ಎಸ್ ಪ್ರವೀಣ್, ಉಮೇಶ್ ಶೆಟ್ಟಿ, ಲೀಲಾವತಿ ಕೆ ಜಿ, ಚೈತನ್ಯ ವೆಂಕಿ, ಸಂಘದ ಎಲ್ಲಾ ಸದಸ್ಯರು, ಷೇರುದಾರರು, ಸಿಬ್ಬಂದಿ ವರ್ಗ, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Scan the code