ಕೋಲಾರ

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕಾಲಾವಕಾಶ ನಿಡಿ.

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕಾಲಾವಕಾಶ ನಿಡಿ.


(KOLARA): ಬಂಗಾರಪೇಟೆ : ತಾಲುಕಿನಾದ್ಯಂತ  “ಸಾಫ್ಟ್ವೇರ್” ಬದಲಾವಣೆ ವಿಷಯವಾಗಿ  ಗ್ರಾಮೀಣ ಮತ್ತು ನಗರ ಸಂಬಂಧಿಸಿದಂತೆ ಅರ್ಜಿ ವಿಲೇವಾರಿ ಆಗದ ಕಾರಣ ಬಹುತೇಕ  ಅರ್ಜಿಗಳು ನೋಂದಣಿ ಆಗದೆ ಬಾಕಿ ಇರುತ್ತದೆ ಆದಕಾರಣ ಸ್ಮಾರ್ಟ್ ಮೀಟರ್ ಅಳವಡಿಸಲು ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಎಂ.ನಂಜಪ್ನನವರ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು

ಪಟ್ಟಣದ ಬೆಸ್ಕಾಂ ಕಛೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮೌನ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳಾದ ಸಾಫ್ಟ್ವೇರ್ ಬದಲಾವಣೆಯಿಂದ ತಾಲೂಕಿನಾದ್ಯಂತ ಸರಿ ಸುಮಾರು 600 ಅರ್ಜಿಗಳು ವಿಲೇವಾರಿ ಆಗದೆ ಉಳಿದಿದೆ ಈ ಸಂದರ್ಭದಲ್ಲಿ ಸ್ಮಾರ್ಟ್ ಮೀಟರ್ ನಿಗದಿತ ಕಾಲಮಿತಿಯೊಳಗೆ ಅಲ್ಲವಡಿಸಲು ಸಾದ್ಯವಿಲ್ಲ ಆದಕಾರಣ ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಶಾಸಕರಿಗೆ ಮನವಿ ಪತ್ರ ನೀಡಿದರು.

   ಏಕಾಏಕಿ ಆದೇಶ ಆರ್ಥಿಕ ಸಂಕಷ್ಟಕ್ಕೆ ಕಾರಣ!
ಬೆಸ್ಕಾಂ ಇಲಾಖೆ ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರರಿಗೆ ಮಾಹಿತಿ ನೀಡಿದೆ
ದಿನಾಂಕ 15-02-2025 ರಿಂದ  ಸ್ಮಾರ್ಟ್ ಮೀಟರ್ (Smart Meter) ವ್ಯವಸ್ಥೆಯನ್ನು ಶಾಶ್ವತ ವಿದ್ಯುತ್ ಮಾಪಕಗಳು ಮಂಜೂರಾತಿಗೆ ಅನ್ವಯಿಸುವಂತೆ ಆದೇಶ ಮಾಡುತ್ತೀರಿ. ಆದರೆ ತಾವುಗಳು ಆದೇಶ ಮಾಡುವ ಮೊದಲು ಜಾಹೀರಾತು, ಸುತ್ತೋಲೆ, ಮೂಲಕ ಮಾಹಿತಿ ನೀಡದೆ ಏಕಾಏಕಿ ಜಾರಿಗೆ ತಂದಿರುವುದರಿಂದ ಗ್ರಾಹಕರಿಗೆ ಮತ್ತು ಗುತ್ತಿಗೆದಾರರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ.

ಗ್ರಾಹಕರಿಗೆ ಆರ್ಥಿಕ ಹೊರೆ!
ಗ್ರಾಮೀಣ ಪ್ರದೇಶಗಳಲ್ಲಿ ಮೊದಲಿದ್ದ ಎನ್ ಸಾಫ್ಟ್ ಬದಲಾಗಿ ಪಿಡಿಯೂ ಇನ್ನಿನಿಟಿ ಗೆ ದತ್ತಾಂಶದ ವರ್ಗಾವಣೆಗಾಗಿ ಈಗಾಗಲೇ ತಮ್ಮ ಕಂಪನಿ ವತಿಯಿಂದ ಚಾಲನೆ ನೀಡಿರುವುದರಿಂದ ಎಲ್ಲಾ ಬಡ ವಿದ್ಯುತ್‌ ಗುತ್ತಿಗೆ ದಾರರಿಗೆ ಅನಾನುಕೊಲವಾಗಿದೆ ಹಾಗೂ ಸಮರ್ಪಕವಾಗಿ ನಿರ್ವಹಿಸಲೂ ಸುಮಾರು ಆರು ತಿಂಗಳು ಕಾಲಾವಕಾಶ ನೀಡಬೇಕು,
ಇದರೊಟ್ಟಿಗೆ   ವಿದ್ಯುತ್ ಸರಬರಾಜು ಕಂಪನಿ ತಮ್ಮ ವಿದ್ಯುತ್  ಅನುಕೂಲಕ್ಕಾಗಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿದ್ದಾರೆ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಗ್ರಾಹಕರಿಗೆ ಆಗುವ ಲಾಭಗಳೇನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಮತ್ತು ಈಗಾಗಲೇ ಹಲವಾರು ರೀತಿಯ ಬೆಲೆ ಏರಿಕೆಯಿಂದ ಗ್ರಹಕರು ಕಂಗಾಲಾಗಿದ್ದಾರೆ ಆದಕಾರಣ ಕಾಲಾವಕಾಶ ನೀಡಬೇಕು ಎಂದು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಸ್ಎನ್ ನಾರಾಯಣ ಸ್ವಾಮಿ ಮನವಿಯನ್ನು ಸ್ವೀಕರಿಸಿ ಈಗಾಗಲೇ ಸರ್ಕಾರ ಸ್ಮಾರ್ಟ್ ಮೀಟರ್ ಅಲವಡಿಕೆಗೆ ಫೆಬ್ರವರಿ ತಿಂಗಳ ಗಡುವು ನೀಡಲಾಗಿತ್ತು ಆದರೆ ಗುತ್ತಿಗೆದಾರರು ತಮ್ಮಗಾಗುವು ಅನಾನುಕೊಲಗಳನ್ನು ತಿಳಿಸಿದ್ದಾರೆ ಈ ಘಟನೆಗೆ ಸಂಬಂಧಿಸಿದಂತೆ ಮಾರ್ಚ್ 13ರ ವರೆಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕಾಲಾವಕಾಶ ನೀಡಲಾಗುವುದು. ಇದರೊಟ್ಟಿಗೆ ಸದನದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಉಂಟಾಗುವ ಸಾದಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪ್ರನಾನ ಕಾರ್ಯದರ್ಶಿ ವೆಂಕಟೇಶ್ ,ಖಜಾಂಚಿ ರಾಮಪ್ಪ, ಉಪಾಧ್ಯಕ್ಷ ಜೀಯಾ ಉಲ್ಲಾ ಹಾಗೂ ಇತರರು ಉಪಸ್ಥಿತರಿದ್ದರು .

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code