ವಯಸ್ಸಾದ ತಂದೆ ತಾಯಿಗಳನ್ನು ಬೀದಿಗೆ ತಳ್ಳಲ್ಪಡುತ್ತಿರುವ ಹಿರಿಯರಿಗೆ ರಕ್ಷಣೆ ಕೋರಿ ಮನವಿ.
(SHIVAMOGA) ಆರ್ಥಿಕವಾಗಿ ಸದೃಡರಾಗಿದ್ದರೂ ವಯಸ್ಸಾದ ತಂದೆ ತಾಯಿ ಬಂಧುಗಳು ಬೀದಿಗೆ ತಳ್ಳಲ್ಪಡುತ್ತಿರುವ ಹಿರಿಯ ನಾಗರೀಕರಿಗೆ ರಕ್ಷಣೆ ಕೋರಿ ಮನವಿ.
ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೇ, ಹಿರಿಯ ನಾಗರೀಕರಿಗೆ ಸಂವಿಧಾನದಲ್ಲಿ ಸಾಕಷ್ಟು ರಕ್ಷಣೆಯನ್ನು ಒದಗಿಸಿದ್ದು, 2007 ರಲ್ಲಿ ಹಿರಿಯ ನಾಗರೀಕರ ಸಂರಕ್ಷಣಾ ಕಾನೂನು ಜಾರಿಗೆ ಬಂದಿರುತ್ತದೆ.
ಆದರೂ ಮಕ್ಕಳು ಮರಿ ಬಂಧುಗಳು ಅವರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ಅವರನ್ನು ಬೀದಿಗೆ ತಳ್ಳುವ ಪ್ರಕರಣಗಳು ಅತಿಹೆಚ್ಚಾಗಿ ಕಂಡು ಬರುತ್ತಿದ್ದು, ಇಂತಹ ಒಬ್ಬಂಟಿ ಮಹಿಳೆಯರನ್ನು ಬೀದಿಗೆ ತಳ್ಳುವುದರಿಂದ ಕಾಮುಕರ ಕಾಟಕ್ಕೆ ಬಲಿಯಾಗಿ ವಿವಿಧ ಸಾಂಕ್ರಾಮಿಕ ರೋಗ ರುಜಿನಗಳಿಗೆ ಸಾರ್ವಜನಿಕರು ಒಳಗಾಗುತ್ತಿದ್ದಾರೆ.
ಇದರಂತೆಯೇ ಸಾಗರ ತಾಲ್ಲೂಕಿನ ಬ್ರಾಹಣ ಸಮುದಾಯದ ದಾಕ್ಷಾಯಿಣಿ ಎಂಬ ಸುಮಾರು 55-60 ವರ್ಷದ ಮಹಿಳೆಯು ದೌರ್ಜನ್ಯಕ್ಕೆ ಒಳಗಾದ ಮಹಿಳೆಯಾಗಿದ್ದಾಳೆ ಇವಳ ಬಂಧುಗಳು ಮಗಳು ಅಳಿಯ ಆರ್ಥಿಕವಾಗಿ ಸದೃಡರಿದ್ದು ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿಯ ನಂದಿತಳೆ ಗ್ರಾಮದವರಾದ ಅವರ ಅಳಿಯ ಗಣಪತಿ ಎಂಬುವರಿದ್ದು ಅವರ ಪೋನ್ ನಂಬರ್ : 9449328813 ಆಗಿದ್ದು ಇವರನ್ನು ಕರೆಸಿ ಸದರಿ ಮಹಿಳೆಗೆ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಸೂಕ್ತ ಭದ್ರತೆ ಒದಗಿಸಿ ಕೊಡಬೇಕಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ಇಂದು ಸಾಗರದ ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದು. ಇನ್ನು ಮುಂದಾರು ಎಚ್ಚೆತ್ತುಕೊಳ್ಳವಂತೆ ಆಗ್ರಹಿಸಲಾಯಿತು.
ಇದೆ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯಾಧ್ಯಕ್ಷ ಶಶಿಕಾಂತ್ ಎಮ್ ಎಸ್, ಸವಿತಾ ಶಶಿಕಾಂತ್, ಕೃಷ್ಣಮೂರ್ತಿ, ಮಿನಾ ಎಮ್.ಎಸ್ ಇನ್ನು ಮುಂತಾದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ