ನ್ಯೂಸ್ಶಿವಮೊಗ್ಗ

ಉಪಟಳ ನೀಡುತ್ತಿದ್ದ ಮಂಗನನ್ನು ಹಿಡಿದು ಸಾಗಾಟಕ್ಕೆ ಯತ್ನ, ಅರಣ್ಯ ಅಧಿಕಾರಿಗಳಿಂದ ರಕ್ಷಣೆ.

ಉಪಟಳ ನೀಡುತ್ತಿದ್ದ ಮಂಗನನ್ನು ಹಿಡಿದು ಸಾಗಾಟಕ್ಕೆ ಯತ್ನ, ಅರಣ್ಯ ಅಧಿಕಾರಿಗಳಿಂದ ರಕ್ಷಣೆ.

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಡಜಿಗಳೇ ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೆಹಳ್ಳಿ ಗ್ರಾಮದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಮಂಗನನ್ನು ಹಿಡಿದು ಸಾಗಾಟಕ್ಕೆ ಯತ್ನಿಸಿದ್ದ ಘಟನೆ ನಡೆದಿದ್ದು, ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಡಿಎಫ್ಓ ಸಂತೋಷ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಬ್ಬಿಣದ ಬೋನುಗಳಲ್ಲಿ ಹಿಡಿದಿಟ್ಟಿದ್ದ 32 ಕ್ಕು ಹೆಚ್ಚು ಮಂಗಗಳನ್ನು ಸೋಮವಾರ ರಕ್ಷಿಸಿದ್ದಾರೆ.


ಘಟನೆ ಸಂಬಂಧ ಬಾಳೆಹಳ್ಳಿ ಗ್ರಾಮದಲ್ಲಿ  ಮಂಗ ಹಿಡಿಯುತ್ತಿದ್ದ ಶಿವಮೊಗ್ಗದ ಗಾಡಿಕೊಪ್ಪ ನಿವಾಸಿಗಳಾದ 5  ಜನರನ್ನು (ಇಬ್ಬರು ಪುರುಷರು ಮೂವರು ಮಹಿಳೆಯರು)  ವಶಕ್ಕೆ ತೆಗೆದುಕೊಂಡು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ  ಶೆಡ್ಯುಲ್ 1 ಅನುಭಂದ.  ಪ್ರಕರಣ ಸಂಖ್ಯೆ 31/2024/2025 ಅಡಿ ಪ್ರಕರಣ ದಾಖಲಾಗಿದೆ…ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಉಳಿದ ಆರೋಪಿಗಳ ಪತ್ತೆ ಗಾಗಿ ವಿಶೇಷ ತಂಡ ಮಾಡಿ ಶೋಧ ಕಾರ್ಯ ನಡೆಯುತ್ತಿದೆ. ಈ ಕಾರ್ಯಾಚರಣೆಯನ್ನು ಡಿ.ಎಪ್‌.ಓ ಅವರ ನಿರ್ದೇಶನದಂತೆ ನಡೆದಿದ್ದು ವಲಯ ಅರಣ್ಯ ಅಧಿಕಾರಿ ಅರವಿಂದ ಅವರ ನೇತ್ರತ್ವದಲ್ಲಿ .ಶಿವಕುಮಾರ್. ಕಿರಣ್‌.ಸುಂದರ್ ಮೂರ್ತಿ. ಅಶೋಕ್ .ಅಣ್ಣಪ್ಪ ಸುರೇಶ್ ವಾಹಮ ಚಾಲಕ ರಾಘವೇಂದ್ರ ಶ್ರೀಮತಿ ಅಮಿತ್ ಶಿವರಾಜ್ ಇನ್ನಿತರು ಪಾಲ್ಗೊಂಡಿದ್ದರು.

ಬಾಳೆಹಳ್ಳಿಯಲ್ಲಿ ಶೂಲಿನಿ ದೇವಸ್ಥಾನದ ಎದುರು ಕಳೆದ ವಾರ ಶಾಸಕ ಗೋಪಾಲಕೃಷ್ಣ ಬೇಳೂರು, ಅರಣ್ಯ ಇಲಾಖೆ ಸೇರಿದಂತೆ ಒಂದಷ್ಟು ಸಂಘಟನೆಗಳ ನೇತೃತ್ವದಲ್ಲಿ ವನಮಹೋತ್ಸವ ನಡೆಸಿದ್ದರು. ಅಲ್ಲಿ ಸೊಪ್ಪಿನ ಬೆಟ್ಟ ಉಳಿಸುವ ಕುರಿತು ಎಲ್ಲರೂ ಬಾಯಿತುಂಬಾ ಕತೆ ಹೇಳಿದ್ದರು.
ಅದಾದ ಮೂರು ದಿನಕ್ಕೆಲ್ಲ ಇದೆ ದೇವಸ್ಥಾನದ ಎದುರಿನ ಸೊಪ್ಪಿನ ಬೆಟ್ಟದಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಟೆಂಟ್ ಹಾಕಿದ್ದರು. ಇದು ಸ್ಥಳೀಯ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಗಸ್ತು ಪಾಲಕರ ಗಮನಕ್ಕೂ ಬಂದಿರಲಿಲ್ಲವೇ? ಅಥವಾ ಗೊತ್ತಿದ್ದೂ ಎಲ್ಲದಕ್ಕೂ ಸಮ್ಮತಿಸಿದ್ದರೆ! ಪಂಚಾಯತಿ ಸದಸ್ಯರು, ಅಧ್ಯಕ್ಷರು, ಪಿಡಿಓ ಮೂರ್ನಾಲ್ಕು ದಿನದಿಂದ ಮಂಗ ಹಿಡಿಯುವ ಕಾರ್ಯಕ್ಕೆ ಪೂರ್ವ ತಯಾರಿ ನಡೆಯುತ್ತಿದ್ದರೂ ಮೌನವಾಗಿ ಸಮ್ಮತಿಸಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.


ಗ್ರಾಮಸ್ಥರು, ಮಹಿಳೆಯರು ಬೆಟ್ಟದಲ್ಲಿ ಸೊಪ್ಪಿನ ಬೆಟ್ಟದಲ್ಲಿ ಕಟ್ಟಿಗೆ ಕಡಿಯಲು ಹೋದವರನ್ನು ತಡೆದು ಕತ್ತಿ ಕಸಿದುಕೊಂಡು ಬೈದು ಕಳುಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗೆ 2 ದಿನದಿಂದ ಮಂಗ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದರೂ ಗೊತ್ತಾಗಿಲ್ಲವೇ? ಸ್ಥಳೀಯರು ಅಧಿಕಾರಿಗಳನ್ನು ವಿಚಾರಿಸಿದರೆ ತಮಗೇನು ಗೊತ್ತಿಲ್ಲ ಎಂದು ಮುಸುಮುಸು ನಗುತ್ತಾರೆ… ಇದೆಂಥ ಬೇಜವಾಬ್ದಾರಿ ನಡವಳಿಕೆ!!!
ಹಾಗಿದ್ದರೆ ಮಲೆನಾಡಿನ ಕಾಡಿನಲ್ಲಿ ರಾತ್ರೋರಾತ್ರಿ ಮರ ಕಳ್ಳಸಾಗಾಣಿಕೆ ನಡೆಯುವುದೂ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುತ್ತಾರಾ ಅರಣ್ಯ ಇಲಾಖೆ ಸಿಬ್ಬಂದಿಗಳು? ಘಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ ಎಂಬ ಅನುಮಾನ ಹೊಗೆಯಾಡುತ್ತಿದೆ. ಬ್ರಾಹ್ಮಣ ಸಮುದಾಯದ ಕೆಲವರನ್ನು ಬಂಧಿಸುತ್ತಿದ್ದಂತೆ ಅಧಿಕಾರಿಗಳ ಮೇಲೆಯೂ ಒತ್ತಡ ಹೇರಲಾಯಿತಾ?
ಎರಡು ದಿನದಿಂದ ಮಂಗ ಹಿಡಿಯುವ ಕೆಲಸ ನಡೆಯುತ್ತಿದ್ದು, ಸೋಮವಾರ ಸಂಜೆ 4-30 ರ ಸಮಯದಲ್ಲಿ ಗ್ರಾಮಸ್ಥರು ಪತ್ರಿಕೆಗಳಿಗೆ ಮಾಹಿತಿ ನೀಡುವ ವರೆಗೂ ಯಾರಿಗೂ ಇದು ತಿಳಿದಿರಲಿಲ್ಲವಾ?

ವರದಿ: ರಾಘವೇಂದ್ರ ತಾಳಗುಪ್ಪ

 

Leave a Reply

Your email address will not be published. Required fields are marked *

Scan the code