ಬೂದಿಕೋಟೆಯ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಿಡೋಸ್ ಕಾರ್ನಿವಾಲ್ ಎಂಬ ವಿನೂತನ ಕಾರ್ಯಕ್ರಮ
(KOLARA): ಬಂಗಾರಪೇಟೆ :ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದೇವೆ ಮಕ್ಕಳಲ್ಲಿ ಆಂತರಿಕವಾಗಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು ಮತ್ತು ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದೆವೆ ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದರು.
ಬೂದಿಕೋಟೆಯ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಿಡೋಸ್ ಕಾರ್ನಿವಾಲ್ ಎಂಬ ವಿನೂತನ ಕಾರ್ಯಕ್ರಮ ಶಾಲಾ ಮಕ್ಕಳಿಂದ ಹಮ್ಮಿಕೊಂಡಿದ್ದರು.ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಇಂದು ವಿನೂತನವಾಗಿ ಕಿಡೋಸ್ ಕಾರ್ನಿವಾಲ್ ಎಂಬ ಕಾರ್ಯಕ್ರಮವನ್ನು ಮೊಟ್ಟಮೊದಲಿಗೆ ಹಮ್ಮಿಕೊಂಡಿದ್ದು,ಕೆಲವು ಕ್ರೀಡಾ ಚಟುವಟಿಕೆಗಳನ್ನು ಸ್ವತಃ ವಿದ್ಯಾರ್ಥಿಗಳೆ ರಚಿಸಿ ಪೂಷಕರ ವೀಕ್ಷಣೆಗೆ ಸಮರ್ಪಿಸಿದ್ದಾರೆ ಎಂದರು.
ಶಾಲೆಯ ಶಿಕ್ಷಕಿ ಶಶಿಕಲಾ ಮಾತನಾಡಿ,ಮಕ್ಕಳು ಭರತನಾಟ್ಯ,ಪಾಶ್ಚಾತ್ಯ ನೃತ್ಯ ಮತ್ತು ಗ್ರಾಮೀಣ ಕಲೆಗಳನ್ನು ಪೋಷಕರ ಮುಂದೇ ಪ್ರಸ್ತುತ ಪಡಿಸಿದರು.ಅನೇಕ ತಿನಿಸುಗಳನ್ನು ವಿದ್ಯಾರ್ಥಿಗಳೆ ತಯಾರಿಸಿ ಅವುಗಳನ್ನು ಮಾರಾಡ ಮಾಡಲು ವ್ಯಾಪಾರ ಮಳಿಗೆಗಳನ್ನು ತೆರೆದು ತಾವು ತಾಯಾರಿಸಿದ ತಿಂಡಿಗಳನ್ನು ಮಾರಾಟ ಮಾಡಿದರು.
ಪಾಠ ಪ್ರವಚನಗಳ ನಡುವೆ ಇಂತಹ ಕಾರ್ಯಕ್ರಮಗಳನ್ನು ಮಕ್ಕಳೇ ಮಾಡುವುದರಿಂದ ಅವರಿಗೆ ಆತ್ಮ ಸ್ಥೈರ್ಯ,ಆತ್ಮ ವಿಶ್ವಾಸ,ಸ್ವಂತಿಕೆ ಮತ್ತು ವ್ಯವಹಾರ ಜ್ಞಾನ ಬೆಳೆಯಲು ಸಹಕಾರಿಯಾಗಿರುತ್ತದೆ ಎಂದು ಹೇಳಿದರು.
ಶಾಲೆಯ ಶಿಕ್ಷಕಿ ಮಂಜುಳಾ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಮೂಲಕ ಪೋಷಕರು ತಮ್ಮ ಮಕ್ಕಳು ಪ್ರತಿಭೆಯನ್ನು ಕಂಡು ಬಹಳ ಸಂತೋಷದಿಂದ ಎಲ್ಲಾ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.ಶಾಲೆಯ ಆಡಳಿತ ಮಂಡಳಿ ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾದ್ಯವಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಪೋಷಕರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ