ಕುಟುಂಬದೊಂದಿಗೆ ತನ್ನ ತವರೂರಲ್ಲಿ ಮತಚಲಾವಣೆ ಮಾಡಿದ ಶಾಸಕರು.
ಸಾಗರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕ ನಿಗಮದ ಅಧ್ಯಕ್ಷರಾದ ಗೋಪಾಲ ಕೃಷ್ಣ ಬೇಳೂರು ರವರು ತಮ್ಮ ಪತ್ನಿ ರಾಧ ಹಾಗು ಪುತ್ರ ನಿಯಾನ್ ರೊಂದಿಗೆ ಬೇಳೂರಿನ ಮತ ಗಟ್ಟೆ ಸಂಖ್ಯೆ 24 ರಲ್ಲಿ ಮತ ಚಲಾಯಿಸುವುದರ ಮೂಲಕ ಅಧಿಕಾರ ಮತ್ತು ಕರ್ತವ್ಯ ನಿಭಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ಈ ಬಾರಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರವರು ಅತ್ಯಂತ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ಬಿ.ಜೆ.ಪಿ ಯ ಕುಟುಂಬ ಅಭಿವೃದ್ಧಿ ಇನ್ನು ಮುಂದಿನ ದಿನದಲ್ಲಿ ಇರೊಲ್ಲ ಬಂಗಾರಪ್ಪ ಅವರ ಮಗಳು ನಟ ಶಿವರಾಜ್ ಕುಮಾರ್ ಅವರ ಪತ್ನಿ ಅತ್ಯಂತ ಹೆಚ್ಚು ಮತಗಳನ್ನು ಪಡೆದು ಇ ಸಲ ಜಯಭೇರಿ ಭಾರಿಸುತ್ತಾರೆ ಎಂದರು. ಹಾಗೆಯೆ ತನ್ನ ಮಗ ಇದೆ ಮೊದಲ ಭಾರಿಗೆ ಮತ ಚಾಲಾಯಿಸುತ್ತಿದ್ದು ಸಂತೋಷ ಆಗಿದೆ ಎಂದರು. ಈ ಸಂದರ್ಭದಲ್ಲ ಶಾಸಕರ ಕುಟುಂಬ ಹಾಗೂ ಅಶೋಕ ಬೇಳೂರು. ವಿ.ಶಂಕರ್.ಅವಿನಾಶ್ ಹಾಗೂ ಉರಿನ ಗಣ್ಯರು ಜೊತೆಯಲ್ಲಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ