ರೈಲಿಗೆ ಸಿಲುಕಿ ವೃದ್ದ ಸ್ಥಳದಲ್ಲೇ ಸಾವು
(SHIVAMOGA): ಶಿವಮೊಗ್ಗ ನಗರದ ವಿದ್ಯಾನಗರ ರೈಲ್ವೆ ನಿಲ್ದಾಣದಲ್ಲಿ ವೃದ್ಧನೊಬ್ಬ ರೈಲುಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗದ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ, ಗುಡ್ಡೇಕಲ್ ನಿವಾಸಿಯಾದ ರುದ್ರಪ್ಪ (60) ದಿನವೂ ಒಂದು ಬಾರಿ ರೈಲ್ವೆ ನಿಲ್ದಾಣ ಹಾಗೂ ಆ ಭಾಗಗಳಲ್ಲಿ ಸುತ್ತುತ್ತಿದ್ದು ಈ ದಿನ ಮೈಸೂರಿನಿಂದ ತಾಳಗುಪ್ಪ ಕಡೆ ಹೋಗುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ವೃದ್ಧ ರುದ್ರಪ್ಪನಿಗೆ ಕಣ್ಣು ಮಂಜಾಗಿ ಕಾಣುತ್ತಿತ್ತು ಹಾಗೂ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ ಇದರಿಂದ ರೈಲು ಬರುವುದು ಅರಿಯದೆ ರೈಲುಗೆ ಸಿಲುಕಿ ಸಾವನಪ್ಪಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.