ಒಂದು ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿದ ಸಂಘ – ಸಂಸ್ಥೆ. ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆ ಕಾರ್ಯಕ್ರಮ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಸಾರ್ವಜನಿಕರ ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣ ಘಟಕ. ಬಾಳೆಹೊನ್ನೂರು ಶೌರ್ಯ ವಿಪತ್ತು ಘಟಕ, ಬಾಳೆಹೊನ್ನೂರು ಪೊಲೀಸ್ ಇಲಾಖೆ ಹಾಗು ಚುಟುಕು ಕವಿ ಯಜ್ಞಪುರುಷ್ ಭಟ್ ಹಾಗು ಪತ್ರಕರ್ತರ ಸಹಕಾರ ದೊಂದಿಗೆ ಬಾಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತಲಿನ ಸ್ವಚ್ಛತಾ ಕಾರ್ಯಕ್ರಮಕ್ಕೆ ಬಾಳೆಹೊನ್ನೂರು ಸಾಹಿತ್ಯ ಪರಿಷತ್ ಹಾಗು ಜಾನಪದ ಪರಿಷತ್ ಮತ್ತು ಭಂಡಾರಿ ಸಂಘ ಬಾಳೆಹೊನ್ನೂರು
ಶೌರ್ಯ ವಿಪತ್ತು ನಿರ್ವಹಣ ಘಟಕ ಮಿತ್ರರೊಡನೆ ಸೇರಿ ಇಂದು ಬಾಳೆಹೊನ್ನೂರ್ ಸಾರ್ವಜನಿಕ ಅರೋಗ್ಯ ಕೇಂದ್ರದ ಸುತ್ತಮುತ್ತ ಇರುವ ಕಸಡ್ಡಿಗಳನ್ನು ಕಸ ಕಡ್ಡಿಗಳನ್ನು ಹೆಕ್ಕಿ ಪೊದೆ ಗಿಡಗಳನ್ನು ಕಡಿದು ಹಾಗೂ ಜೆಸಿಬಿ ಮೂಲಕ ಎಲ್ಲಾ ಕಸಗಳನ್ನು ಗುಡ್ಡೆ ಮಾಡಿ ಸ್ವಚ್ಛತೆ ಮಾಡಲಾಯಿತು.