ಚಿಕ್ಕಮಗಳೂರುನ್ಯೂಸ್ಮಲೆನಾಡು

ಬಳಕೆಗೆ ಬಾರದ ಮಾರುಕಟ್ಟೆ. ಕೈ ಕಟ್ಟಿ ಕೂತ ಗ್ರಾಮ ಪಂಚಾಯಿತಿ.

ಬಳಕೆಗೆ ಬಾರದ ಮಾರುಕಟ್ಟೆ. ಕೈ ಕಟ್ಟಿ ಕೂತ ಗ್ರಾಮ ಪಂಚಾಯಿತಿ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಬಿ.ಕಣಬೂರೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಂತೆ ಮಾರುಕಟ್ಟೆ ಸಾರ್ವಜನಿಕರ ಉಪಯೋಗಕ್ಕೆ ಬಾರದ ಮಾರುಕಟ್ಟೆಯಾಗಿದೆ. ಅಧಿಕಾರಿಗಳು ಮಾತ್ರ ಬೀದಿ ಬದಿಯ ವ್ಯಪರಿಗಳಿಗೆ ಮಸೀದಿ, ಚರ್ಚ್, ಮಂದಿರ ಮುಂಭಾಗ ಮಾರುವಂತಿಲ್ಲ ಎಂದು ಧಮ್ಕಿ ಹಾಕುವ ಅಧಿಕಾರಿಗಳು ಹಾಗೂ ಪಂಚಾಯತ್ ಅಧ್ಯಕ್ಷರು ಇತ್ತ ಕೂಡ ಗಮನ ಹರಿಸಬೇಕು.



ಮಾರುಕಟ್ಟೆಯ ಬಗ್ಗೆ ಜನರ ಅಭಿಪ್ರಾಯ
ಮಾರುಕಟ್ಟೆ ಯಾವುದೇ ಪ್ರಯೋಜನಕ್ಕೆ ಒಳಗಾಗುತ್ತಿಲ್ಲ  ಭಾನುವಾರದಂದು ನಡೆಯುವ ಸಂತೆ ಮಾರುಕಟ್ಟೆ ರಸ್ತೆ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ನಡೆಯುತ್ತದೆ. ಇದರಿಂದ ರಸ್ತೆ ಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿರುತ್ತದೆ . ಅಲ್ಲದೆ ಜನಸಂಚಾರಕ್ಕೂ ತುಂಬಾ ಅಡಚನೆಯುತಾಗುತ್ತಿರುತ್ತದೆ. ಮಾರ್ಕೆಟ್ ಮಾತ್ರ ದೊಡ್ಡದಾಗಿ ಕಟ್ಟಿಸಿದ್ದು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಮಾರುಕಟ್ಟೆ ಉದ್ಘಾಟನೆಗೊಂಡು ವರ್ಷಕ್ಕೆ ಮೂರು ತಿಂಗಳು ಅಥವಾ ಎರಡು ತಿಂಗಳು ಸಂತೆ ಆಗುತ್ತದೆ. ಮಳೆ ಹೆಚ್ಚಾಗಿ ಭದ್ರನದಿ ಉಕ್ಕೇರಿದರೆ ಡೋಬಿ ಹಳ್ಳದ ಪಕ್ಕದಲ್ಲಿರುವ ಮಾರುಕಟ್ಟೆ ಪೂರ್ಣ ನೀರು ಪಾಲಾಗುತ್ತದೆ.ತಗ್ಗು ಪ್ರದೇಶವಾಗಿರುವುದರಿಂದ ಮಳೆ ಹೆಚ್ಚಾದಾಗ ಪೂರ್ತಿ ಮಾರುಕಟ್ಟೆ ಮುಳುಗುವ ಪರಿಸ್ಥಿತಿ ಉಂಟಾಗುತ್ತದೆ. ವ್ಯಾಪಾರಸ್ಥರಿಗೆ ಯಾವುದೇ ಪ್ರಯೋಜನವಾಗದಿರುವ ಸ್ಥಳದಲ್ಲಿ ಮಾರುಕಟ್ಟೆಯನ್ನು ಕಟ್ಟಿ ಸುಮಾರು 90 ಲಕ್ಷ ಅಂದಾಜು ಹಣವನ್ನು ವ್ಯರ್ಥ ಮಾಡಿದ್ದಾರೆ. ಹಾಗೂ ಇತ್ತೀಚೆಗೆ ಅನೈತಿಕ ಚಟವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.


ಮಾರುಕಟ್ಟೆ ಇರುವ ಪ್ರದೇಶ
ಮಾರುಕಟ್ಟೆ ಇರುವ ಸ್ಥಳ ಬಾಳೆಹೊನ್ನೂರು ಮಳೆ ಹೆಚ್ಚಾಗಿ ಬರುವ ಪ್ರದೇಶ. ಮಲೆನಾಡು ಭಾಗಗಳಲ್ಲಿ ನಿರಂತರ ಆರು ತಿಂಗಳ ಕಾಲ ಮಳೆ ಸುರಿಯುವುದರಿಂದ ಮಾರುಕಟ್ಟೆ ನಗರ ಮಧ್ಯ ಹಾದು ಹೋಗುವ ದೋಬಿಹಳ್ಳದ ಪಕ್ಕದಲ್ಲಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಭದ್ರಾ ನದಿಯ ನೀರು ಹೆಚ್ಚಾದಾಗ  ಮಾರುಕಟ್ಟೆ ನೀರು ಪಾಲಾಗುತ್ತದೆ. ಮಾರುಕಟ್ಟೆ ನಿರ್ಮಾಣಕ್ಕೆ ಆಗಿನ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ. ಮಾರುಕಟ್ಟೆಯ ಸುತ್ತ ಮುತ್ತ ಬೆಳೆದಿರುವ ಗಿಡ ಪೊದೆಗಳ ರಾಶಿ ಹಾಗೆ ಇದ್ದು ಇತ್ತಕಡೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೂ ಗಮನ ಹರಿಸಬೇಕು ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Scan the code