ಕೋಲಾರನ್ಯೂಸ್

ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್ಎಸ್ಎಸ್ ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್ ಸಿ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ.

ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್ಎಸ್ಎಸ್ ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್ ಸಿ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ.

(KOLARA): ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಇಲ್ಲಿ 23-24 ನೇ ಸಾಲಿನ ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್ಎಸ್ಎಸ್ ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್ ಸಿ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿಯವರು ಭಾರತದಲ್ಲಿ ಮಾತ್ರ ಅತ್ಯಂತ ಕಡಿಮೆ ಹಣದಲ್ಲಿ ಬಡವರಿಗೆ ಶಿಕ್ಷಣ ದೊರೆಯುತ್ತದೆ. ಎಲ್ಲಿ ಯವರಿಗೆ ವಿದ್ಯಾವಂತ ಮಂದಿ ಸಾರ್ವತ್ರಿಕ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವುದಿಲ್ಲವೋ ಅಲ್ಲಿಯತನಕ ಈ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ರಾಜ್ಯ ಅಧಿಕಾರ ಮಾಡುತ್ತಾರೆ.

ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರು ಪಾಠ ಮಾಡುವುದೇ ಅವರ ಕೆಲಸವಲ್ಲ ವಿದ್ಯಾರ್ಥಿಗಳನ್ನು ಅನ್ನದ ದಾರಿಯನ್ನ ಹುಡುಕಿ ಕೊಡುವ ಕೆಲಸ ಮಾಡಬೇಕೆಂದು ತಿಳಿಸಿದರು. ಕೇವಲ ನಾಲ್ಕು ಗೋಡೆ ಮಧ್ಯೆ ಮಾತ್ರ ವಿದ್ಯಾರ್ಥಿಗಳು ಆಲೋಚನೆ ಮಾಡದೆ ಹೊರಗಡೆ ಸಮಾಜ ಇದೇ ಎಂಬುದನ್ನು ಮನಗಂಡು ತಮ್ಮ ತಂದೆ ತಾಯಿಗಳಿಗೆ ಕೀರ್ತಿ ತರಬೇಕು. ಕಲಿತ ವಿದ್ಯೆ ತನಗೆ ಅಲ್ಲದೆ ತನ್ನ ಸುತ್ತಮುತ್ತಲಿನ ಮಂದಿಯನ್ನು ಸಹ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ಅವರಿಗೆ ಮಾರ್ಗದರ್ಶನ ಆಗುವಲ್ಲಿ ಮನವರಿಕೆ ಮಾಡಿಕೊಡಬೇಕು. ಗಂಡ ಬೇರುಂಡ ಪಕ್ಷಿ ವಿಶೇಷವಾಗಿ ಅದಕ್ಕೆ ಎರಡು ಕೊಕ್ಕಿರುತ್ತದೆ ಆದರೆ ಆಹಾರ ಸೇರುವುದು ಒಂದೇ ದೇಹಕ್ಕೆ ಹಾಗೆ ಭಾರತ ಕೂಡ ವಿವಿಧತೆಯಿಂದ ಕೂಡಿರುವ ಐಕ್ಯತ ಬಲಿಷ್ಠ ಭಾರತ ಕಟ್ಟಲು ಯುವ ಜನಾಂಗ ಅದರಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕೆಂದರು.

ನಂತರ ಪ್ರಾಂಶುಪಾಲರಾ ಶ್ರೀನಿವಾಸಗೌಡ ಅವರು ಮಾತನಾಡಿ ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎಲ್ಲ ಮಕ್ಕಳು ಬಡ ಮಾಧ್ಯಮದ ವರ್ಗದ ಕೈಯಿಂದ ಬಂದಿರುವ ನೀವುಗಳು ನಿಮ್ಮ ತಂದೆ ತಾಯಿಗಳಿಗೆ ಒಳ್ಳೆ ಕೀರ್ತಿಯನ್ನು ನಿಮ್ಮ ಭವಿಷ್ಯತ್ತಿನ ಬಗ್ಗೆ ಸದಾ ಕಾಳಜಿಯನ್ನು ವಹಿಸಿ ಸಮಾಜದಲ್ಲಿ ಪೈಪೋಟಿ ಹೆಚ್ಚು ಹೆಚ್ಚಾಗಿ ಇರುವುದರಿಂದ ಅದನ್ನು ಹೇಗೆ ಎದುರಿಸಬೇಕು ಹೇಗೆ ಉನ್ನತ ಸ್ಥಾನಕ್ಕೆ ಏರಬೇಕೆಂದು ಕರೆನೀಡಿದರು. ವೇದಿಕೆಯಲ್ಲಿ  ಶಂಕರಪ್ಪ, ಕೆ ವಿ ಸತೀಶ್, ಮುರುಳಿಧರ್ ಎಸ್ ತ್ಯಾಗರಾಜ್, ಮುರಳಿ ಕಾಲೇಜಿನ ಮ್ಯಾನೇಜರ್ ಮಂಜುನಾಥ ಪ್ರಸನ್ನ ಕುಮಾರಿ ಪ್ರೊಫೆಷನಲ್ ಮಹೇಶ್ ಡಾ. ವಿಜಯ್ ಇತಿಹಾಸ ವಿಭಾಗದ ಮುನಿರಾಜು ರತ್ನಪ್ರಭಾ ಮುಂತಾದವರು ಹಾಜರಿದ್ದರು ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code