ನರೇಂದ್ರ ಮೋದಿಯ 10 ವರ್ಷದ ಸಾಧನೆಗಳು ಮೆಚ್ಚಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ.
(SHIVAMOGA): ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಸನ್ಮಾನ್ಯ ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಇತ್ತೀಚಿಗೆ ಬಿ ಜೆ ಪಿ ಸೇರಿದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಹಕ್ಕಿ ಮಲ್ಲಿಕಾರ್ಜುನ್ ರವರ ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಆವಿನಹಳ್ಳಿ ಗ್ರಾಮಪಂಚಾಯತಿ ಸದಸ್ಯರಾದ ಚಂದ್ರಶೇಖರ ಕಂಚಿಮನೆ ಹಾಗೂ ದೇವರಾಜ್ ಕರ್ಕಿಕೊಪ್ಪ, ರಾಘು ಮೂರ್ಕೈ, ರುದ್ರೇಶ್ ಪುಣಜೆ ಇವರುಗಳು ಕಾಂಗ್ರೇಸ್ ಅನ್ನು ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ದೇವೇಂದ್ರಪ್ಪ ಯಲಕುಂದ್ರಿಯವರು ಎಲ್ಲರನ್ನು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಒಮ್ಮೆ ಪಕ್ಷಕ್ಕೆ ಬಂದಮೇಲೆ. ಮೂಲ ಎಂಬ ಬೇದ-ಭಾವ ಇಲ್ಲದೆ ಎಲ್ಲರೂ ಎಂದಾಗಿ ಒಟ್ಟಾಗಿ ಬಿಜೆಪಿ ಪರವಾಗಿ ಕೆಲಸ ಮಾಡೋಣ ಎಂದರು.
ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ಹಕ್ರ ಮಲ್ಲಿಕಾರ್ಜುನ್, ಸುವರ್ಣ ಟೀಕಪ್ಪ, ರೂಪಾ ರಮೇಶ್, ವಿ ಮಹೇಶ್, ಶಿವಕುಮಾರ್. ಪ್ರವೀಣ್ ವಕೀಲರು, ನಾಗರಾಜ್ ಮಜ್ಜಿಗೆರೆ, ಉಪಸ್ತಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ