ಪೋಷಕರು ನಿರ್ಲಕ್ಷವೋ ? ಏರ್ ಗನ್ ಗೆ ಬಲಿಯಾದ ಬಾಲಕ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಬಾಲಕನೊಬ್ಬ ಏರ್ ಗನ್ ಲ್ಲಿ ಶೂಟ್ ಮಾಡಿಕೊಂಡು ಮರಣ ಹೊಂದಿರುತ್ತಾನೆ .
ಬಾಲಕರಿಬ್ಬರು ಜೋತೆಯಲ್ಲಿ ಕೊಠಡಿಯಲ್ಲಿ ಆಟವಾಡುವಾಗ ಕೊಠಡಿಯಲ್ಲಿ ಇದ್ದ ಏರ್ ಗನ್ ಮೇಲೆ ಅಚಾನಕ್ಕಾಗಿ ಬಾಲ್ಸ್ ಬಿದ್ದಿದೆ. ಇದರಿಂದ ಗನ್ ಟ್ರಿಗರ್ ಆಗಿ ದುರಾದೃಷ್ಟವಶಾತ್ ಇಬ್ಬರು ಬಾಲಕರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ. ಮೃತ ದುರ್ದೈವಿ ವಿಷ್ಣು (7) ಈ ಸಮಯದಲ್ಲಿ ಮಕ್ಕಳೊಂದಿಗೆ ಪಾಲಕರು ಸಹ ಇದ್ದರು ಎನ್ನಲಾಗಿದೆ.
ಪಾಲಕರು ಮನೆಯಲ್ಲಿಯೇ ಇದ್ದುದರಿಂದ ಈ ದುರಂತಕ್ಕೆ ಪೋಷಕರ ನಿರ್ಲಕ್ಷವೇ ಕಾರಣ ಎನ್ನಾಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.