ಸಾರ್ವಜನಿಕ ಸ್ಥಳದಲ್ಲಿ ಏರ್ಗನ್ ರೀತಿಯ ಪಿಸ್ತೂಲ್ ಮತ್ತು ಲಾಂಗ್ ನ್ನು ಹಿಡಿದುಕೊಂಡು ಜಿಪಿ ರಸ್ತೆಯಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳ ಬಂಧನ
(SHIVAMOGA) : ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ಪೇಟೆಯ ಜಿಪಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ:11/02/2024 ರಂದು ಸಂಜಯ್ ಎಂಬ ವ್ಯಕ್ತಿ ಕೆಲಸ ಮುಗಿಸಿಕೊಂಡು ರಾತ್ರಿ 10-30 ಗಂಟೆಗೆ ಜಿಪಿ ರಸ್ತೆಯಲ್ಲಿ ದರ್ಶನ್ (18) ಮತ್ತು ನವೀನ್ (27) ಎಂಬ ವ್ಯಕ್ತಿಗಳು ಪಿಸ್ತೂಲ್ ಮತ್ತು ಲಾಂಗನ್ನು ಹಿಡಿದುಕೊಂಡು ಓಡಾಡುತ್ತಿದರು.
ಆಗ ಸಂಜಯ್ ರವರು ಅವರ ಹತ್ತಿರ ಹೋಗಿ ಕೇಳಿದಾಗ ನಾವು ಈ ಏರಿಯಾದ ಡಾನ್ ಗಳು ನಮ್ಮನ್ನು ಯಾರೂ ಕೇಳೊ ಹಾಗಿಲ್ಲ ಎಂದು ಹೇಳಿ ಏ ಬಚ್ಚಾ ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹಾಕುತ್ತೇವೆ ಎಂದು ಹೆದರಿಸಿದ್ದು ಸಂಜಯ್ ರವರು ನೀಡಿದ ದೂರಿನ ಮೇರೆಗೆ ಠಾಣಾ ಅಪರಾಧ ಸಂಖ್ಯೆ 56/2024 ಕಲಂ 25(1)(ಬಿ), 3 & 25 ಆಯುಧ ಕಾಯ್ದೆ ಹಾಗೂ 506 ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ಪತ್ತೆ ಮಾಡುವಂತೆ ಶ್ರೀ ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರುಗಳ ಸೂಚನೆಯ ಮೇರೆಗೆ ಶ್ರೀ ಗೋಪಾಲಕೃಷ್ಣ ತಿ ನಾಯಕ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಸಾಗರ ಉಪ ವಿಭಾಗ ಸಾಗರ ರವರ ಮಾರ್ಗದರ್ಶನದ ಮೇರೆಗೆ ಶ್ರೀ ಸೀತಾರಾಮ್ ಪಿ.ಐ ಸಾಗರ ಟೌನ್ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಗಳಾದ ಶ್ರೀನಿವಾಸ್ ಮತ್ತು ವಿಶ್ವನಾಥ ರವರು ದಿನಾಂಕ:12/02/2024 ರಂದು ಸಂಜೆ 06-45 ಗಂಟೆಗೆ ಗಣಪತಿ ಕೆರೆಏರಿಯಾ ರಸ್ತೆಯಲ್ಲಿ ಆರೋಪಿಗಳಾದ ದರ್ಶನ್ ತಂದೆ ಕುಮಾರ ನಾಯ್ಕ 18 ವರ್ಷ ಬಾವಿಕೆಲಸ ವಾಸ ಜಿ.ಪಿ ರಸ್ತೆ ನಾಗಾಲಯ ದೇವಸ್ಥಾನದ ಹತ್ತಿರ ಬಾಡಿಗೆ ಮನೆ ಸ್ವಂತ ವಿಳಾಸ ಕೋಹಳ್ಳಿ ತಾಂಡ ಆಯನೂರು 2) ನವೀನ್ ತಂದೆ ಸಿ.ಪಿ ನಾಗರಾಜ 27 ವರ್ಷ ಪೇಟಿಂಗ್ ಕೆಲಸ ವಾಸ ಜಿ.ಪಿ ರಸ್ತೆ ಸಾಗರ ಟೌನ್ ರವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಒಂದು ನಕಲಿ ಏರ್ ಗನ್ ರೀತಿಯ ಪಿಸ್ತೂಲ್ ಹಾಗೂ ಸುಮಾರು 2 ಅಡಿ ಉದ್ದದ ಲಾಂಗನ್ನು ಆರೋಪಿಗಳ ಸಮೇತ ವಶಕ್ಕೆ ಪಡೆದು ದಿನಾಂಕ:13/02/2024 ರಂದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
ಮಾನ್ಯನ್ಯಾಯಾಲಯವು ದಿನಾಂಕ:27/02/2024 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ. ಈ ಕಾರ್ಯ ಮಾಡಿದ ಸಾಗರ ಪೇಟೆ ಪೊಲೀಸ್ ಠಾಣೆಯ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಅಭಿನಂದನೆ ಸಲ್ಲಿಸಿರುತ್ತಾರೆ.
ವರದಿ: ರಾಘವೇಂದ್ರ ತಾಳಗುಪ್ಪ