ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯ ಬಂಧನ,
(KOLARA): ಬಂಗಾರಪೇಟೆ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯ ಬಂಧನ, 5.8 ಲಕ್ಷ ಮೌಲ್ಯದ 07 ದ್ವಿಚಕ್ರ ವಾಹನಗಳು ವಶಪಡಿಸಿಕೊಂಡರು .
ತಾಲ್ಲೂಕಿನ ಬೂದಿಕೋಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ಆರೋಪಿಯನ್ನು ಬಂಧಿಸಿ, ರೂ. 5.8 ಲಕ್ಷ ಮೌಲ್ಯದ 07 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬೂದಿಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿ.29 ರಂದು ಬೂದಿಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ವಿಜಯಕುಮಾರ್ ಎಸ್ ಮತ್ತು ಚಂದ್ರಶೇಖರ್ ಕೆ.ಎಂ ರವರು ಕೋಡಗುರ್ಕಿ ಕ್ರಾಸ್ ಬಳಿ ಗಸ್ತಿನಲ್ಲಿದ್ದಾಗ, ತಾಲ್ಲೂಕಿನ ಕದಿರೇನಹಳ್ಳಿ ಗ್ರಾಮದ ವಾಸಿಯಾದ ಪ್ರವೀಣ್ ಎಂಬುವರು ಪಲ್ಸರ್ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಬರುತ್ತಿದ್ದು, ಅನುಮಾನದ ಮೇರೆಗೆ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ಠಾಣಾ ಸರಹದ್ದಿನ ವಿವಿದೆಡೆ 07 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವ ಬಗ್ಗೆ ತಿಳಿಸಿದ್ದು, ಆರೋಪಿಯ ಕಡೆಯಿಂದ ಸುಮಾರು ರೂ: 5,80,000/- ಮೌಲ್ಯದ 07 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬೂದಿಕೊಟೆ ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ಐರೋಡಗಿ, ಸಿಬ್ಬಂದಿಯಾದ ವಿಜಯಕುಮಾರ್.ಎಸ್, ಅಮರೇಶ್ ಎನ್.ವಿ. ಪ್ರಭಾಕರ್, ಶ್ರೀಕಾಂತ್ ಹರಿಜನ, ಚಂದ್ರಶೇಖರ್ ಕೆ.ಎಂ ವೆಂಕಟೇಶ ,ಟಿ, ಮಂಜುನಾಥ ಬಿ.ಆರ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಸಿಸಿದ್ದಾರೆ.
ವರದಿ: ವಿಷ್ಣು ಕೋಲಾರ