ಸಾಗವಾನಿ ಮರ ಅಕ್ರಮವಾಗಿ ಕಡಿತಲೆ ಮಾಡಿ ಕಳ್ಳ ಸಾಗಾಣಿಕೆ ಇಬ್ಬರು ಆರೋಪಿಗಳ ಬಂಧನ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರು ಹೋಬಳಿ ಅಳೇಹಳ್ಳಿ ಗ್ರಾಮದ 8ನೇ ಮೈಲಿಕಲ್ಲು ವ್ಯಾಪ್ತಿಯ ಕೂಸ್ಕಲ್ ಮೀಸಲು ಅರಣ್ಯ ಪ್ರದೇಶದ ಸಾಗವಾನಿ ನೆಡುತೋಪಿನಲ್ಲಿ ಅಕ್ಟೋಬರ್ 24 ರ ಮಧ್ಯರಾತ್ರಿ ಸಾಗವಾನಿ ಮರವೊಂದನ್ನು ಅಕ್ರಮವಾಗಿ ಕಡಿತಲೆ ಮಾಡಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಹಿಂದ್ರ ಜೀತೊ ವಾಹನವನ್ನು ಬೆಲೆ ಬಾಳುವ ಸ್ವತ್ತು ಸಮೇತ ಹಿಡಿದು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಗ್ರಹಾರ ವಲಯದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಪತ್ತೆ ಹಚ್ಚಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಆದರ್ಶ ಎಂ ಪಿ ರವರ ನೇತೃತ್ವದಲ್ಲಿ ವಲಯದ ಸಿಬ್ಬಂದಿಗಳ ಸಹಕಾರ ನೆರವಾಯಿತು. ಉಪ ವಲಯ ಅರಣ್ಯಾಧಿಕಾರಿಗಳಾದ ನಂದೀಶ ಹೆಚ್ ಬಿ, ರಂಗನಾಥ ಆರ್ ಅತಾಲಟ್ಟಿ ಹಾಗೂ ಗಸ್ತು ಅರಣ್ಯ ಪಾಲಕರಾದ ಪ್ರತಾಪ್ ಆರ್, ರಂಗನಾಥ ಕೆ ಹೆಚ್, ನಾಗರಾಜ ಎಂ ಡಿ, ಲೋಹಿತ್, ಚಾಲಕರಾದ ನಾಗರಾಜ್ ಮತ್ತು ಪವನ್ ಇತರರು ಹಾಜರಿದ್ದರು.ಹಾಗು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.