ಚಿಕ್ಕಮಗಳೂರಿನಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ…!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಸ್ ನಿಲ್ದಾಣ ಬಳಿ ಮಹಿಳೆ ಒಬ್ಬರ ಕೊಲೆ ಮಾಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕ್ರೂರವಾಗಿ ಹತ್ಯೆ ಮಾಡಿದ್ದು.ಮೃತ ಮಹಿಳೆಯನ್ನು ಹಳೆ ಮೂಡಿಗೆರೆಯ ಸರ್ವೋದಯ ನಗರದ ಕವಿತಾ ಎಂದು ಗುರುತಿಸಲಾಗಿದೆ. ವಯಸ್ಸು 60 ಹಾಗು ಇವರಿಗೆ ಒಬ್ಬ ಮಗ ಇದ್ದು,
ಮಹಿಳೆಯನ್ನು ಕವಿತಾ, ಗೀತಾ, ಸವಿತಾ ಎಂದು ನಾನಾ ಹೆಸರಿನಿಂದ ಕರೆಯುತಿದ್ದರು ಎನ್ನಲಾಗಿದೆ.
ಈ ಹತ್ಯೆಗೆ ಸಂಬಂದಿಸಿದಂತೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.