ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಪ್ರತಿಭಟನೆ ನಡೆಸಿದ ಕಲಾವಿದರು.
(VIJAYANAGARA):AIDYO ಅಖಿಲ ಭಾರತ ಸಮಿತಿಯ ನಿರುದ್ಯೋಗ ವಿರುದ್ಧ ಹೋರಾಟದ ಕರೆಯ ಮೇರೆಗೆ ಇಂದು ಜಿಲ್ಲಾ ಮಟ್ಟದ ಹೋರಾಟದ ಭಾಗವಾಗಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕಲಾ ಶಿಕ್ಷಕರನ್ನು ನೇಮಕ ಮಾಡುವಂತೆ ಇಂದು ಪ್ರತಿಭಟನೆ ನಡೆಸಿದರು.
ಖಾಲಿ ಇರುವ ಸಂಗೀತ, ಚಿತ್ರಕಲಾ ಮತ್ತು ರಂಗಕಲಾ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ,ಕೂಡ್ಲಿಗಿ ಹಾಗೂ ಇಳಕಲ್ , ಧಾರವಾಡ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿಯ ದೃಶ್ಯ ಕಲಾ, ಸಂಗೀತ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ವಿವಿಧ ಕಲಾ ಪ್ರಕಾರಗಳಾದ ಸಂಗೀತ, ನೃತ್ಯ, ನಾಟಕ ಹಾಗೂ ಚಿತ್ರಕಲಾ ಶಿಕ್ಷಕರ ಖಾಯಂ ನೇಮಕಾತಿಗಳು ನಡೆದು ದಶಕಗಳೇ ಕಳೆದಿವೆ. ಸುಮಾರು 10-12 ವರ್ಷಗಳು ಕಳೆದರೂ ನೇಮಕಾತಿ ಪ್ರಕ್ರಿಯೆಯ ಸುಳಿವು ಇಲ್ಲ..!
ಶಿಕ್ಷಣ ಕಲಿಕಾ ಪ್ರಕ್ರಿಯೆಯಲ್ಲಿ ಹಾಗೂ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಸಂಗೀತ, ನೃತ್ಯ, ಚಿತ್ರಕಲೆ, ದೈಹಿಕ ಶಿಕ್ಷಣದ ಅವಶ್ಯಕತೆ ಬಹಳ ಮಹತ್ವದ ಸಂಗತಿ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಇಂತಹ ಮಹತ್ವದ ಸೂಚನೆ ಹೊರತಾಗಿಯೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಹಲವು ಆರ್ಥಿಕ ಮತ್ತು ಸಾಮಾಜಿಕ ಕಷ್ಟಗಳನ್ನು ಎದುರಿಸಿ, ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವ ಭರವಸೆಯಿಂದ ಶಿಕ್ಷಣ ಪೂರೈಸಿದ್ದಾರೆ. ವಯೋಮಿತಿ ಮೀರಿ ಹೋಗುವ ಕಾಲ ಬಂದರೂ. ನೇಮಕಾತಿ ಪ್ರಕ್ರಿಯೆ ಸುಳಿವಿಲ್ಲ. ಅವರ ಕನಸು ನನಸಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಪ್ರತಿಭಟನೆಯ ನಂತರದಲ್ಲಿ ಮುಂದಿನ ಹೋರಾಟದ ಕುರಿತು AIDYO ರಾಜ್ಯಸಮಿತಿ ಅಧ್ಯಕ್ಷರಾದ ಶರಣಪ್ಪ ಉದ್ಭಳ್ ಅವರು ಕಲಾವಿದರೊಂದಿಗೆ ಚರ್ಚಿಸಲಾಯಿತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವರದಿ: ಸುನೀಲ್ ಕುಮಾರ್ ಎಂ NSD