ಸೆ- 29ಕ್ಕೆ ಕರ್ನಾಟಕದ ಬಂದ್
ಕಾವೇರಿ ಒಡಲು ಬತ್ತಿದಷ್ಟು, ರೈತರ ಕಿಚ್ಚು ಹೆಚ್ಚಾಗುತ್ತಿದೆ.
(Karnataka): ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಖಂಡಿಸಿ ರೈತರು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಅದು ಯಾವುದೆ ಪ್ರಯೋಜನ ಪಡೆದಿಲ್ಲ ಹಾಗಾಗಿ ಇಂದು ಬೆಂಗಳೂರು ಬಂದ್ ಮಾಡಲಾಗಿದೆ. ಬಸ್, ಒಲಾ, ಆಟೋ, ಬಿಎಂಟಿಸಿ ಬಸ್ ಇದ್ದರು ಸಹ ಓಡಾಡಲು ಜನರು ಇಲ್ಲದಂತಾಗಿತ್ತು ಬೆಂಗಳೂರು.
ಹಲವು ಸಂಘಟನೆಗಳು ಹಾಗೂ ರೈತ ಸಂಘಗಳು ಸೇರಿ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು. ಇಂದು ಬೆಂಗಳೂರು ಬಂದ್ ಮಾಡಲಾಗಿದೆ. ಬೆಂಗಳೂರು ಬಂದ್ ತೀವ್ರಗೊಳ್ಳುತ್ತಿದ್ದಂತೆ,ಬಂದ್ ನಲ್ಲಿ ಭಾಗಿಯಾಗಿದ್ದಂತಹ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ವಾಟಾಳ್ ನಾಗರಾಜ್, ಬಿಜೆಪಿ ಮುಖಂಡರು, ರೈತರು, ರೈತ ಮುಖಂಡರು, ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ತಮಿಳುನಾಡು ಬಸ್ ಸಂಚಾರ ಇಂದು ಬಂದ್ ಮಾಡಲಾಗಿತ್ತು. ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ನಾಳೆ ಬೆಳಗ್ಗೆ 11:30ಕ್ಕೆ ಮುಖ್ಯಮಂತ್ರಿ ಅವರ ಮನೆ ಮುಂದೆ ಕನ್ನಡ ಒಕ್ಕೂಟದಿಂದ ಸತ್ಯಾಗ್ರಹ ಮಾಡಿ ನೀರು ಬೀಡದಂತೆ ಒತ್ತಾಯ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ರವರು ಹೇಳಿದ್ದಾರೆ.ಹಾಗೆಯೇ ಇದೇ ವಿಚಾರವಾಗಿ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದರು.
ಕರ್ನಾಟಕ ಚಿತ್ರತಂಡ ಹಾಗೂ ನಟರಿಂದ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಹಾಗೂ ಕರ್ನಾಟಕದ ರಾಜಕಾರಣಿಗಳು ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. CWRC ಇಂದು ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸೂಚನೆ ನೀಡಿದೆ. ಕರುನಾಡಿಗೆ ಮತ್ತೆ ಅನ್ಯಾಯವಾಗಿರುವುದರಿಂದ, ಸೆ.29ಕ್ಕೆ ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ. ರಾಜಭವನವನ್ನು ಮುತ್ತಿಗೆ ಹಾಕುತ್ತೇವೆ ಎಂದು ಕನ್ನಡ ಒಕ್ಕೂಟ ಘೋಷಣೆ ಮಾಡಿದೆ. ಶುಕ್ರವಾರ ನಡೆಯುವ ಅಖಂಡ ಕರ್ನಾಟಕ ಬಂದ್ ಸೇರಿದಂತೆ ರಾಜ್ಯಾದ್ಯಂತ ಭಾರೀ ಚಳುವಳಿ ನಡೆಸುವ ಬಗ್ಗೆ ಕನ್ನಡ ಒಕ್ಕೂಟ ಕರೆ ನೀಡಿದ್ದಾರೆ.
*ರಾಜ್ಯ ಸರ್ಕಾರ ಬರ ಘೋಷಣೆ
ಈ ಬಾರಿ ರಾಜ್ಯ ದಲ್ಲಿ ಮಳೆ ಸರಿಯಾಗಿ ಬಾರದ ಕಾರಣ ರಾಜ್ಯಕ್ಕೆ ಬರ ಘೋಷಣೆ ಮಾಡಿರುವ ಸರ್ಕಾರ. ಮತ್ತೆ ಮತ್ತೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆ, ಮೈಸೂರು ರೈತರು ಸಹ ಪ್ರತಿಭಟನೆಗಳು ನಡೆಸಿದ್ದವು. ಮತ್ತೊಂದೆಡೆ ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಿಚ್ಚು ತೀವ್ರಗೊಳ್ಳುತ್ತಿದ್ದು, ರೈತರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
*ಪೋಲೀಸರ ಊಟದಲ್ಲಿ ಇಲಿ ಪತ್ತೆ
ಕಾವೇರಿಗಾಗಿ ಬೆಂಗಳೂರು ಬಂದ್ ನ ಪ್ರತಿಭಟನೆ ವೇಳೆ ಹೆಚ್ಚಿನ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ತಂದಿದ್ದ ಊಟದಲ್ಲಿ ಇಲಿ ಪತ್ತೆಯಾಗಿದೆ. ಭದ್ರತೆಗೆ ನಿಯೋಜನೆ ಗೊಂಡ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಬೆಳಗಿನ ಉಪಹಾರದಲ್ಲಿ ಸತ್ತ ಇಲಿ ಒಂದು ಕಂಡು ಬಂದಿದ್ದೆ.
*ತಮಿಳುನಾಡಿನಲ್ಲೂ ಸತ್ತ ಇಲಿ ಹಿಡಿದು ಪ್ರತಿಭಟನೆ.
ಕಾವೇರಿ ಕಿಚ್ಚು ತಮಿಳುನಾಡಿನಲ್ಲೂ ಹೆಚ್ಚಾಗಿದ್ದು. ತಮಿಳುನಾಡಿನ ಹಲವು ರೈತ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿವೆ.
ಅರೆಬೆತ್ತಲಾಗಿ ರೈತರು ಇಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ
ಹಾಗೂ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಮಗೆ ನೀರು ಬಿಡದಿದ್ದರೆ ಕರ್ನಾಟಕಕ್ಕೆ ಕರೆಂಟ್ ನ್ನು ನೀಡಬೇಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಹಲವು ಕಡೆಗಳಲ್ಲಿ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ.