ಚಿಕ್ಕಮಗಳೂರುನ್ಯೂಸ್ರಾಜಕೀಯ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಷಡ್ಯಂತರ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಷಡ್ಯಂತರ ನಡೆಸುತ್ತಿದ್ದಾರೆ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕರ್ಕೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಖ ಸುಮ್ಮನೆ ಯಾವುದೇ ಹುರುಳಿಲ್ಲದೆ ಅಪಪ್ರಚಾರವನ್ನು ಕೆಲವರು ಮಾಡುತ್ತಿದ್ದು ಇದು ರಾಜಕೀಯ ಪ್ರೇರಿತವಾಗಿರುತ್ತದೆ.

ಗುಲಾಬಿ w/o ತಿಮ್ಮೇಗೌಡ ಎಂಬವರಿಗೆ ಮನೆ ನೀಡುವುದಿಲ್ಲವೆಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಆರೋಪ ಮಾಡುತ್ತಿರುವವಾರಿಗೆ ಸರಿಯಾದ ಮಾಹಿತಿ ಇರುವುದಿಲ್ಲ ಒಬ್ಬರು 10 ವರ್ಷಗಳಿಂದ ಮನೆ ಕೇಳುತ್ತಿದ್ದಾರೆ ಎಂದು ಹೇಳಿದರೆ, ಇನ್ನೊಬ್ಬರು 2018 ರಿಂದ ಕೇಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ, ಮತ್ತೊಬ್ಬರು ಅಧ್ಯಕ್ಷರು ಮತ್ತು ಪಿಡಿಓ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಅವರಲ್ಲಿಯೇ ಗೊಂದಲದ ಹೇಳಿಕೆಗಳು ಹೊರಬರುತ್ತಿವೆ. ಕುಮಾರ್ ಅವರ 2018ರಲ್ಲಿ ಮನೆ ಕೇಳಿದ್ದೇವೆ ಎಂದು ಹೇಳುತ್ತಾರೆ ಆದರೆ 2018ರಲ್ಲಿ ಅವರ ಪತ್ನಿ ಲೀಲಾವತಿಯವರು ಪಂಚಾಯಿತಿ ಸದಸ್ಯರಾಗಿದ್ದರು. ಆ ಸಮಯದಲ್ಲಿ ಮನೆ ಏಕೆ ನೀಡಲಿಲ್ಲವೆಂದು ಅದಕ್ಕೆ ಸ್ಪಷ್ಟನೆ ನೀಡಬೇಕು.

 

2017ರ ವಸತಿ ರಹಿತರ ಆಯ್ಕೆ ಪಟ್ಟಿಯಲ್ಲಿ ಗುಲಾಬಿಯವರ ಹೆಸರನ್ನು ನಮೂದಿಸಿದೆ ಇರುವುದರಿಂದ ಅವರಿಗೆ ಮನೆ ಕೊಡಲು ಕಷ್ಟ ಸಾಧ್ಯವಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದ ವೆಬ್ ಸೈಟ್ ನಲ್ಲಿ ಅವರ ಹೆಸರು ನಮೂದನೆ ಯಾಗಿರುವುದಿಲ್ಲ ಇದನ್ನು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಇದು ನಿಜ ವಿಚಾರವಾಗಿದ್ದು ಆ ಭಾಗದ ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ರವರು ಜವಾಬ್ದಾರಿ ಸ್ಥಾನದಲ್ಲಿದ್ದು. ಸಂಪೂರ್ಣ ಮಾಹಿತಿ ಇದ್ದರೂ ಸಹ ನೈಜತೆಯನ್ನು ಮರೆಮಾಚಿ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಅದೇ ರೀತಿ ಕರ್ಕೇಶ್ವರ-ಗುಬ್ಬೂರು ರಸ್ತೆಗೆ ಗ್ರಾಮಸ್ಥರು ಎಲ್ಲರೂ ಸೇರಿ ಮಣ್ಣನ್ನು ಹಾಕುತ್ತಿದ್ದು. ಅದರಿಂದಲೂ ಸಹ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಈ ರಸ್ತೆಗೆ 1998ರಲ್ಲಿ ಎಸ್ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ಡಿ.ಬಿ ಚಂದ್ರೇಗೌಡರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂಎಸ್ ಚೆನ್ನಕೇಶಗೌಡರು ಅವರ ಪ್ರಯತ್ನದಿಂದ ಡಾಂಬರೀಕರಣಗೊಂಡಿದ್ದು ತದನಂತರ 15 ವರ್ಷಗಳ ಕಾಲ ಬಿಜೆಪಿಯ ಶಾಸಕರಿದ್ದು ಅವರ ಸರ್ಕಾರವು ಇದ್ದರು ಸಹ ಒಂದು ಹಾರೆ ಮಣ್ಣನ್ನು ರಸ್ತೆಗೆ ಬಿದ್ದಿರುವುದಿಲ್ಲ ಕಳೆದ ಪಾರ್ಲಿಮೆಂಟ್ ಚುನಾವಣೆ ಸಮಯದಲ್ಲಿ PMGSY ಯೋಜನೆ ಅಡಿಯಲ್ಲಿ ಹಣ ಬಿಡುಗಡೆಯಾಗಿದೆ ಶೋಭಕ್ಕ ಶಂಕುಸ್ಥಾಪರಿಗೆ ಬರುತ್ತಾರೆಂದು ಪ್ರಚಾರ ಮಾಡಿ ಚುನಾವಣೆ ಮುಗಿದ ನಂತರ ಸುದ್ದಿ ಇರಲಿಲ್ಲ ಮತ್ತೆ ಪಾರ್ಲಿಮೆಂಟ್ ಚುನಾವಣೆ ಬಂದಿರುವುದು ಮತ್ತೆ ರಸ್ತೆ ವಿಚಾರ ಮುಂದೆ ಮುನ್ನಡೆಗೆ ಬಂದಿರುತ್ತದೆ. ಈಗ ಪಕ್ಷಾತೀತವಾಗಿ ರಸ್ತೆಗೆ ಮಣ್ಣು ಹಾಕಿ ಲಾಗುತ್ತಿದ್ದು ನನ್ನ ಟ್ಯಾಕ್ಟರ್ ಸಹ ಕಳಿಸುತ್ತಿದ್ದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾನು ಮತ್ತು ನಮ್ಮ ಸದಸ್ಯರು ಪಕ್ಷತೀತವಾಗಿ ಕೆಲಸ ಮಾಡುತ್ತಿದ್ದು ಸಹಿಸಲಾಗದ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಷಡ್ಯಂತರ ನಡೆಸುತ್ತಿದ್ದಾರೆ. ಇದು ಮುಂದುವರೆದಲಿ ಮುಂದುವರೆದಲಿ ತೀಕ್ಷಣವಾಗಿ ಖಂಡಿಸುತ್ತೇವೆ. ಎಂದು ಕರ್ಕೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜೇಶ್ ಕೆ ಎಸ್ ರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code