ಅಶೋಕ್ ಭಾರತಕ್ಕೆ ಮತ್ತೆ ಮರಳಲಿದ್ದಾರೆ. ಕಾಂಬೋಡಿಯಲ್ಲಿ ಸಿಲುಕಿದ್ದ ಅಶೋಕ್.
(CHIKKAMAGALURU) ಕಾಂಬೋಡಿಯಾಗೆ ಕೆಲಸಕ್ಕೆ ತೆರಳಿದ ಯುವಕ ಮಾಲೀಕರ ಬಳಿ ಬಂಧಿ. ಬಾಳೆಹೊನ್ನೂರು ವಿದೇಶಕ್ಕೆ ಕೆಲಸಕ್ಕೆ ಹೋದ ಯುವಕನೊಬ್ಬ ಬ್ರೋಕರ್ಗಳಿಂದ ಮೋಸ ಹೋಗಿ ಮಾಲೀಕರ ಬಳಿ ಸಿಲುಕಿಕೊಂಡು ಸ್ವದೇಶಕ್ಕೆ ವಾಪಾಸ್ ಬರಲಾಗದೆ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ-ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮೊದಲ ಪುತ್ರ ಅಶೋಕ್ (26) ವಿದೇಶದಲ್ಲಿ ಸಿಲುಕಿಕೊಂಡ ಯುವಕನಾಗಿದ್ದಾನೆ. ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಎನ್.ಆರ್.ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದರು.
“ಕಾಂಬೋಡಿಯದ ಯುವಕನನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡಾ.ಆರತಿ ಕೃಷ್ಣ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ” ನಿರಂತರವಾಗಿ ಅಶೋಕನ ತಂದೆ ಸುರೇಶ್ ಮತ್ತು ಪ್ರೇಮ ಹಾಗೂ ಕುಟುಂಬಸ್ಥರ ಸಂಪರ್ಕದಲ್ಲಿದ್ದ ಡಾ. ಆರತಿ ಕೃಷ್ಣ ನವರು ಸಂಪೂರ್ಣ ಮಾಹಿತಿಯೊಂದಿಗೆ ಅಶೋಕ್ನನ್ನು ಮತ್ತೆ ತಾಯಿನಾಡಿಗೆ ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡಾ. ಆರತಿ ಕೃಷ್ಣ ರವರು.
ತಮ್ಮ ಮಗ ಬೇಕಾದಲ್ಲಿ 13 ಲಕ್ಷ ಕೊಡಬೇಕೆಂದು ಕಾಂಬೋಡಿಯದ ಗ್ಯಾಂಗ್ ಕರೆಯ ಮೂಲಕ ಅಶೋಕನ ಪೋಷಕರಿಗೆ ಕರೆ ಮಾಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪತ್ರಿಕೋದ್ಯಮಗಳು ಹೆಚ್ಚಿನ ತನಿಖೆಗಳನ್ನು ನಡೆಸಿ ಅಶೋಕ್ ನ ಪರಿಸ್ಥಿತಿ ಹಾಗೂ ಕಾಂಬೋಡಿಯಾದಲ್ಲಿ ಸಿಲುಕಿದ್ದ ಯುವಕರ ಬಗ್ಗೆ ಸಂಕ್ಷಿಪ್ತವಾಗಿ ವರದಿ ಮಾಡಿದ್ದವು. ವರದಿ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ರಾಜಕಾರಣಿಗಳು ಹಾಗೂ ಕೇಂದ್ರ ಸರ್ಕಾರ ಈಗ ಅಶೋಕ್ ನನ್ನು ಮರಳಿ ತಾಯ್ನಾಡಿಗೆ ಕರಿಸುವ ಪ್ರಯತ್ನವಾಗಿದೆ.
ಅಂದು ಸುಷ್ಮಾ ಸ್ವರಾಜ್ ಹೇಳಿದ ಮಾತು : “ಭಾರತೀಯರು ಮಂಗಳ ಗ್ರಹದಲ್ಲಾದರೂ ಇರಲಿ. ಅವರನ್ನು ಹುಷಾರಾಗಿ ಕರೆತರುವ ಜವಾಬ್ದಾರಿ ನಮ್ಮದು” ಎಂದು.
ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿರಿಸಿಕೊಂಡು ಭಾರತೀಯರಿಗೆ ಮೋಸ ಮಾಡಿಸುವ ಕೆಲಸದಲ್ಲಿ ಚೀನಾ ಕಂಪನಿಯ ಕೈವಶದಲ್ಲಿದ್ದ ಬಾಳೆಹೊನ್ನೂರಿನ ಮಾಗುಂಡಿ ಸಮೀದ ಮಹಲ್ಗೋಡು ಗ್ರಾಮದ ಅಶೋಕ್ ಈಗ ಭಾರತೀಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗುವ ಪ್ರಕ್ರಿಯೆಯಲ್ಲಿದ್ದಾರೆ.
ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದ ಅಶೋಕ್ ರನ್ನು ಭಾರತಕ್ಕೆ ಕರೆತರುವಂತೆ ಪೋಷಕರು ಮನವಿ ಮಾಡಿದ್ದರು. ಈ ಸಂಬಂಧ ಮಾಜಿ ಸಚಿವರಾದ ಡಿ.ಎನ್.ಜೀವರಾಜ್ ಅವರು ಅಕ್ಟೋಬರ್ 28 ರಂದು ಪೋಷಕರನ್ನ ಭೇಟಿ ಮಾಡಿ ಸುರಕ್ಷಿತವಾಗಿ ಕರೆ ತರುವ ಸಕಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರ ಗಮನಕ್ಕೆ ತಂದ ಕೂಡಲೇ, ಕಾಂಬೋಡಿಯಾದ ಭಾರತೀಯ ರಾಯಭಾರಿ ಕಚೇರಿಯನ್ನ ಸಂಪರ್ಕ ಮಾಡಿ ಅಶೋಕ್ ರವರನ್ನ ರಕ್ಷಣೆ ಮಾಡಿ ಭಾರತೀಯ ರಾಯಭಾರಿ ಕಚೇರಿಗೆ ಸುರಕ್ಷಿತವಾಗಿ ಕರೆತಂದು, ಭಾರತಕ್ಕೆ ಹಿಂತಿರುಗುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಶೋಕ್ ನ ತಂದೆ ತಾಯಿ ಹಾಗೂ ಊರಿನ ಗ್ರಾಮಸ್ಥರು ಮಾಜಿ ಸಚಿವರಾದ ಡಿ.ಎನ್.ಜೀವರಾಜ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಬಾಳೆಹೊನ್ನೂರು ಹೋಬಳಿ ಬಿಜೆಪಿ ನಾಯಕರಿಗೆ ಧನ್ಯವಾದಗಳು ತಿಳಿಸಿದ್ದಾರೆ.