ನ್ಯೂಸ್ಶಿವಮೊಗ್ಗ

ಯಲ್ಲೋ ಮುತ್ತೂಟ್ ಸಂಸ್ಥೆ ವತಿಯಿಂದ ಸಿಎಸ್‍ಆರ್ ಅನುದಾನದಡಿಯಲ್ಲಿ ಆಶ್ರಮ ಶಾಲೆಗೆ ಸಹಾಯ

ಯಲ್ಲೋ ಮುತ್ತೂಟ್ ಸಂಸ್ಥೆ ವತಿಯಿಂದ ಸಿಎಸ್‍ಆರ್ ಅನುದಾನದಡಿಯಲ್ಲಿ ಆಶ್ರಮ ಶಾಲೆಗೆ ಸಹಾಯ

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಅಶೋಕ ರಸ್ತೆಯಲ್ಲಿರುವ ಮುತ್ತೂಟ್ ಮಿನಿ ಗೋಲ್ಡ್‍ಲೋನ್ (ಯಲ್ಲೋ ಮುತ್ತೂಟ್) ಸಂಸ್ಥೆ ವತಿಯಿಂದ ಸಿಎಸ್‍ಆರ್ ಅನುದಾನದಡಿಯಲ್ಲಿ ಶಿವಪ್ಪ ನಾಯಕ ನಗರದ ಆಶ್ರಮ ಶಾಲೆಯ 1ರಿಂದ 8ನೇ ತರಗತಿ ಮಕ್ಕಳಿಗೆ ಗುರುವಾರ 125 ಛತ್ರಿ, 60 ಬ್ಯಾಗ್, ನೋಟ್ ಬುಕ್ 150 ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ರೀಜನಲ್ ಮ್ಯಾನೇಜರ್ ಕೆ.ಎಚ್. ಗುರು, ಶಾಖಾ ವ್ಯವಸ್ಥಾಪಕ ಡಿ. ನವೀನ್ ಕುಮಾರ್, ಸಂಸ್ಥೆಯ ಎ. ಮೇಘನಾ, ಎಸ್. ಎಚ್.ಅಶ್ವಿನಿ, ಯಶವಂತ್, ಜಿ.ಎಂ.ವಿಶ್ವಾಸ್, ಎಸ್‍ಡಿಎಂಸಿ ಅಧ್ಯಕ್ಷ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಗಜೇಂದ್ರ, ಗಣೇಶ್, ರೇಷ್ಮಾ, ಜ್ಯೋತಿ, ಶುಭರತ್ನ, ನಾಗರತ್ನ, ಪ್ರಕಾಶ್ ಭಟ್, ನಾಗರಾಜ್ ಜೈನ್, ಮುಖ್ಯ ಶಿಕ್ಷಕ ಎಂ.ಪಿ. ಸತ್ಯನಾರಾಯಣ, ಶಿಕ್ಷಕರಾದ ಜ್ಯೋತಿ ಪಿ. ಹೆಗಡೆ, ಸುನೀತಾ, ನಾಗರತ್ನ, ಮೊದಲಾದವರು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code