ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದಾ ಡ್ರೈವರ್, ಡ್ರೈವರ್ ನಿಂದಲೇ ಕಸ ತೆರವು
(CHIKKAMAGALURU): ಮಳೆಗಾಲದಲ್ಲಿ ಚಾರ್ಮಾಡಿ ಘಾಟಿನಲ್ಲಿ ವಾಹನ ಸಂಚಾರ ಮಾಡುವುದೇ ಕಷ್ಟಕರವಾಗಿರುವುದರಿಂದ ಅದರಲ್ಲೂ ಕಸ ಎಸೆದು ಹೋದ ಡ್ರೈವರ್, ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದು ಹೋಗಿದ್ದ ವಾಹನವನ್ನು ಪತ್ತೆ ಹಚ್ಚಿ ಕೆ.ಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿದ ಘಟನೆ ನಡೆದಿದೆ.
ಮಂಗಳವಾರ ಹಾಸನ ಮೂಲದ ಎಳೆನೀರು ವಾಹನ ಚಾರ್ಮಾಡಿ ಘಾಟಿಯಲ್ಲಿ ವಾಹನದಲ್ಲಿ ಇದ್ದ ಕಸವನ್ನು ಘಾಟ್ ನಲ್ಲಿ ಬಿಸಾಕಿದ್ದು ಆ ತಕ್ಷಣವೇ ಚಾರ್ಮಾಡಿ ಘಾಟ್ ಗಸ್ತಿನಲ್ಲಿ ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ.ವಿ ರೇಣುಕಾ ಕಸವನ್ನು ಬಿಸಾಕಿ ಹೋದ ವಾಹನವನ್ನು ಗೇಟ್ ನಲ್ಲಿ ಹಿಡಿದು ವಾಪಾಸ್ ಕರೆ ತಂದಿದ್ದಾರೆ. ಕೆ ಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ದಂಡ ವಿಧಿಸಿ ಮತ್ತೆ ಕಸವನ್ನು ಚಾಲಕನಿಂದಲೇ ವಾಹನದಲ್ಲಿ ತುಂಬಿಸಿ ಕಳುಹಿಸಿದ್ದಾರೆ.