ಇಂದಿಗೂ ದಲಿತರ ಮೇಲಿನ ದೌರ್ಜನ್ಯ ಹೆಗ್ಗಿಲ್ಲದೆ ಸಾಗುತ್ತಿದೆ,
(KOLARA): ಬಂಗಾರಪೇಟೆ :ಇಂದಿಗೂ ದಲಿತರ ಮೇಲಿನ ದೌರ್ಜನ್ಯ ಹೆಗ್ಗಿಲ್ಲದೆ ಸಾಗುತ್ತಿದೆ, ದಲಿತರು ವಾಸಮಾಡುವ ಮನೆಗೆಂದು ಮೀಸಲಿಟ್ಟ ರಸ್ತೆಯನ್ನು ಕೆಲವು ಪ್ರಾಭಾವಿ “ಭೂ”ಪರು ನುಂಗಿ ಅನಾದಿಕೃತವಾಗಿ ಶೇಡ್ ನಿರ್ಮಿಸಿಕೊಂಡಿದ್ದಾರೆ. ಈ ಕೊಡಲೆ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ ಸಂದೇಶ್ ಆಗ್ರಹಿಸಿದರು.
ಪಟ್ಟಣದ ಹೃದಯಭಾಗದಲ್ಲಿರುವ ಅಬ್ದುಲ್ ಅಲಿ ಲೇಔಟ್ ನೊಂದ ದಲಿತ ಮನೆಯ ಮುಂದೆ ಪತ್ರಿಕಾ ಹೇಳಿಕೆ ನೀಡಿದ ಅವರು, ದಲಿತ ಕುಟುಂಬಕ್ಕೆ ಸೇರಿದ ವೈಯೋವೃದ್ಧೆ ಮಂಗಮ್ಮ ಎಂಬುವರು ಸೊಪ್ಪು ವ್ಯಾಪಾರ ಮಾಡಿ ಖಾಸಗಿ ಫೈನಾನ್ಸ್ ಗಳಿಂದ ಸಾಲ ಪಡೆದು ಸರ್ವೇ ನಂ 23/2 ರಲ್ಲಿ ಗುಂಟೆ ಪ್ರಕಾರವಾಗಿ ನಿವೇಶನ ಖರೀದಿ ಮಾಡಿ ಪುರಸಭೆವತಿಯಿಂದ ಖಾತೆ ಮಾಡಿಸಿ ಮನೆ ಕಟ್ಟಿಕೊಂಡಿರುತ್ತಾರೆ ಸದರಿ ನಿವೇಶನಕ್ಕೆ ಅನಾದಿಕಾಲದಿಂದಲ್ಲೂ ರಸ್ತೆ ಇರುತ್ತದೆ.
ಆದರೆ ಇವರ ಮನೆಯ ಮುಂಭಾಗದಲ್ಲಿರುವ ಭರತ್, ಅಶೋಕ್, ಮಂಜು, ದೀಪಕ್ ಎಂಬ ಪ್ರಭಾವಿಗಳು ದಿಢೀರ್ ರಸ್ತೆಯನ್ನು ಅತಿಕ್ರಮಿಸಿ ಅಲೋ ಬ್ಲಾಕ್ ಗಳಿಂದ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ ಇದ್ದ ಒಂದು ರಸ್ತೆ ಮುಚ್ಚಿದ ಕಾರಣ ದಿಕ್ಕು ತೋಚದೆ ಬಡ ದಲಿತ ವೃದ್ಧೆ ಕಂಗಾಲಾಗಿದ್ದಾರೆ ಇವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಕೊಡಲೆ ಅಧಿಕಾರಿಗಳು ಒತ್ತುವರಿ ದಾರರ ವಿರುದ್ಧ ರಸ್ತೆ ಅತಿಕ್ರಮಣ ,ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು,ಇಲ್ಲದೆ ಹೋದಲ್ಲಿ ಸದರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನಕಲುಕುವ ಕಥೆ:
75 ವರ್ಷದ ವಯೋವೃದ್ಧೆ ಹಾಗೂ ಅಂಗವೈಪಲ್ಯದಿಂದ ಬಳಲುತ್ತಿರುವ ವ್ಯಕ್ತಿ ಇವರ ಪೊಷಣೆಗೆ ಕೂಲಿ ಮಾಡಿ ಸಾಕುತ್ತಿರುವ ಮಗಳು, ಇಂತವರು ವಾಸಮಾಡುವ ಮನೆಯನ್ನು ಕಬಳಿಸುವ ದುರುದ್ದೇಶದಿಂದ ಪ್ರಭಾವಿಗಳು ಶಾಮೀಲಾಗಿ ರಸ್ತೆ, ನೀರು, ವಿದ್ಯುತ್ ಸ್ಥಗಿತಗೊಳಿಸಿರುವುದು ನಾಚಿಕೆಗೇಡಿನ ಸಂಗತಿ, ಇವರಿಗೆ ನನ್ನ ಪ್ರಾಣ ಒತ್ತೆಯಿಟ್ಟಾದರೂ ನ್ಯಾಯ ಒದಗಿಸಲು ಸಿದ್ಧ ಎಂದು ರಾಜ್ಯಾಧ್ಯಕ್ಷ ಕುಪೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್, ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ