ನಾಲ್ಕು ಕಡೆಗಳಲ್ಲಿ ಒಂದೇ ಬಾರಿ ದಾಳಿ. 600ಗ್ರಾಂ ಒಣ ಗಾಂಜಾ ಜಪ್ತಿ.
(SHIVAMOGA): ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ಬಾರಿ 4 ಕಡೆ ದಾಳಿನಡೆಸಿ ಅಧಿಕಾರಿಗಳು ಒಣ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮಾನ್ಯ ಅಬಕಾರಿ ಉಪಆಯುಕ್ತರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಸಾಗರವಲಯದಲ್ಲಿ 04 ಕಡೆ ( ಅಣಲೇಕೊಪ್ಪ, ಎಸ್ ಎನ್ ನಗರ ವರದಹಳ್ಳಿ ರಸ್ತೆ )ದಾಳಿ ನೆಡೆಸಿ ಒಟ್ಟು 600 ಗ್ರಾಂ ಒಣಗಾಂಜಾ ಜಪ್ತು ಪಡಿಸಿಕೊಂಡು 04 ಎನ್ ಡಿ ಪಿ ಎಸ್ ಪ್ರಕರಣಗಳನ್ನು ದಾಖಲು ಮಾಡಲಾಯಿತು.
ವಲಯ ಕಛೇರಿಯಿಂದ ಸಂದೀಪ್ ಎಲ್ ಸಿ ಅಬಕಾರಿ ನಿರೀಕ್ಷಕರು ಸಾಗರ ವಲಯ ಹಾಗೂ ಸಂತೋಷ್ ರಡ್ಡೇರ್ ಅಬಕಾರಿ ಉಪ ನಿರೀಕ್ಷಕರು ಸಾಗರ ವಲಯ ರವರು ಮತ್ತು ಉಪವಿಭಾಗ ಕಛೇರಿಯಿಂದ ಶಿವಪ್ರಸಾದ್ ಅಬಕಾರಿ ಉಪ ಅಧೀಕ್ಷಕರು ಸಾಗರ ಹಾಗೂ ವಾಸವಿ ಅಬಕಾರಿ ಉಪ ನಿರೀಕ್ಷಕರು ಪ್ರಕರಣಗಳನ್ನು ದಾಖಲಿಸಿರುತ್ತಾರೆ.
03 ಆರೋಪಿಗಳನ್ನು ನ್ಯಾಯಾಂಗವಶಕ್ಕೆ ನೀಡಿದ್ದು 01 ಆರೋಪಿಯು ತಲೆಮರೆಸಿಕೊಂಡಿದ್ದು ಪತ್ತೆ ಹಚ್ಚಿ ಬಂದಿಸಬೇಕಿರುತ್ತದೆ.
ವರದಿ: ರಾಘವೇಂದ್ರ ತಾಳಗುಪ್ಪ