ಆಟೋ-ಕಾರು ಡಿಕ್ಕಿ, ಆಟೋಚಾಲಕ ಸೇರಿ ಇಬ್ಬರ ಸಾವು
(SHIVAMOGA): ಸಾಗರ ಪಟ್ಟಣದ ಹೊರವಲಯದಲ್ಲಿರುವ ತ್ಯಾಗರ್ತಿ ರಸ್ತೆಯ ಬೊಮ್ಮತ್ತಿ ಬಳಿ ಸಾಗರದಿಂದ ಹೋಗುತ್ತಿದ್ದ ಆಟೋ ಹಾಗೂ ಬೊಮ್ಮತ್ತಿ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ, ಗಂಭೀರವಾಗಿ ಗಾಯಗೊಂಡಿದ್ದ ಮಾಲತಿ ರಾಮಪ್ಪರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾರೆ.
ಕಾರೆಹೊಂಡದ ರಾಮಪ್ಪ ಕುಟುಂಬದವರು ಸಾಗರದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪೂಜೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿ, ಪಕ್ಕದ ಊರಿನವರಾದ ದೊಡ್ಡಬೈಲಿನ ರಾಘವೇಂದ್ರರ (ಅಂದಾಜು 45ವರ್ಷ)ವರ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿರುವ ವೇಳೆಯಲ್ಲಿ ಬೊಮ್ಮತ್ತಿ ಬಳಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಆಟೋದಲ್ಲಿದ್ದ ಕಾರೆಹೊಂಡದ ರಾಮಪ್ಪ (40) ಹಾಗೂ ಇಬ್ಬರು ಮಕ್ಕಳಾದ ಕೃತಿಕಾ (12) ಹಾಗೂ ಸಾನ್ವಿಕ (8)ಯವರಿಗೂ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಂಬಳೇಬೈಲಿನ ಕೃಷ್ಣಮೂರ್ತಿಯವರು ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆನ0ದಪುರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ