ಕೇಂದ್ರ ಸಂಘಕ್ಕೆ ಡಾ ಇಂಚರ ನಾರಾಯಣಸ್ವಾಮಿ ರವರು ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ
(KOLARA): ಕೋಲಾರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ(ರಿ) ಬೆಂಗಳೂರು ಇವರು ಜಿಲ್ಲೆ ಮತ್ತು ತಾಲೂಕಿನ ನರಸಾಪುರ ಹೋಬಳಿಯ ಚಾಕರಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಡಾ ಇಂಚರ ನಾರಾಯಣಸ್ವಾಮಿ ರವರನ್ನು ಕೇಂದ್ರ ಸಂಘಕ್ಕೆ ರಾಜ್ಯ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಯಿತು,
ಕೇಂದ್ರ ಸಂಘಕ್ಕೆ ರಾಜ್ಯ ಉಪಾಧ್ಯಕ್ಷರಾಗಿ ನಾಮ ನಿರ್ದೇಶನಗೊಂಡ ಡಾ ಇಂಚರ ನಾರಾಯಣಸ್ವಾಮಿ ರವರು ರಾಜ್ಯಾಧ್ಯಕ್ಷರಾದ ಶ್ರೀಯುತ ನಾಗೇಶ್ ಕೆ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ನುಗ್ಲಿ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು ಹಾಗೂ ನಾಮ ನಿರ್ದೇಶನಕ್ಕೆ ಶ್ರಮವಹಿಸಿದ ಎಂ ನಾಗರಾಜ್ ಮತ್ತು ಅಪ್ಪೇಗೌಡ ರವರಿಗೂ ಸಹ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.
ವರದಿ: ವಿಷ್ಣು ಕೋಲಾರ