ಸಾಗರ ತಾಲೂಕಿನಲ್ಲಿ ಕಾರ್ಮಿಕರ ಅರಿವು ಕಾರ್ಯಕ್ರಮ ಯಶಸ್ವಿ.
(SHIVAMOGA): ಸಾಗರ ತಾಲೂಕಿನಲ್ಲಿ ಕಾರ್ಮಿಕರ ಅರಿವು ಕಾರ್ಯಕ್ರಮವನ್ನು ಇಲಾಖೆ ಮತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಲಾಯಿತು . ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಾನ್ಯ ಸಾಗರ ತಾಲೂಕಿನ ನ್ಯಾಯಾಧೀಶರಾದ ಎಸ್. ನಟರಾಜ್ ರವರು ಉದ್ಘಾಟಿಸಿದರು. ಪ್ರಾಥಮಿಕ ನುಡಿಯನ್ನು ಕಾರ್ಮಿಕರಿಗೆ ತಿಳಿ ಹೇಳಿದರು. ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ತಗಳುವ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಮಾರ್ಗಸೂಚಿಯನ್ನು ಅನುಸರಿಸಬೇಕು ಕಾರ್ಮಿಕರಿಗೆ ಅಗತ್ಯವಾದ ಇನ್ಶುರೆನ್ಸ್ ಮತ್ತೆ ಅಗತ್ಯವಾದ ಪರಿಕರಗಳನ್ನು ನೀಡಬೇಕು ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿ ಹೇಳಿದರು. ಮಾಲೀಕರಲ್ಲಿ ಸೌಜನ್ಯದಿಂದ ವರ್ತಿಸಿ ಮಾಲೀಕರೊಡನೆ ಹಾಗೂ ಗ್ರಾಹಕರುಣೆ ಉತ್ತಮ ಬಾಂಧವ್ಯವನ್ನ ಹೊಂದಬೇಕು ಕಾರ್ಮಿಕ ಇಲಾಖೆಯಲ್ಲಿ ಬರುವಂತಹ ಯೋಜನೆಗಳ ಬಗ್ಗೆ ಅರಿವು ಪಡೆದು ಪಡೆದುಕೊಳ್ಳಬೇಕು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಶಿಲ್ಪಾ ರವರು ಮತ್ತು ಎಲ್ಲಾ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು. ಮತ್ತು ಸತೀಶ್ ಅಂಗಡಿ ಮತ್ತು ರಮೇಶ್ ಬಂದಗದ್ದೆ ಅವರು ಕಾರ್ಯಕ್ರಮದ ಉಸ್ತುವಾರಿಯನ್ನು ಉಳಿಸಿಕೊಂಡು ಕಾರ್ಯಕ್ರಮವನ್ನು ಚಂದಗೊಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಕಾರ್ಮಿಕರು ಹಾಜರಿದ್ದರು. ಪ್ರಮುಖರಾದ ಶಿವಾನಂದ ಕುಗ್ವೆ, ರಮೇಶ್ ಬಂಧಗದ್ದೆ, ರಾಬರ್ಟ್ ಗೌನ್ಸ್, ಸಿದ್ದಪ್ಪ, ಮಂಜುನಾಥ್, ಷಣ್ಮುಖ ಫೋಟೋಗ್ರಾಫರ್ ಸಂಘದ ಅಧ್ಯಕ್ಷರು, ರಜನಿಕಾಂತ್, ಶ್ರೀಮತಿ, ವೇದಿಕೆಯಲ್ಲಿ ಉಪಸತ್ತಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ