ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಯಲಬುರ್ಗಿ ಗ್ರಾಮದಲ್ಲಿ ವಿಶೇಷ ಪೂಜೆ, ರಾಮಕೋಟಿ
(KOLARA): ಬಂಗಾರಪೇಟೆ :ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆ ತಾಲ್ಲೂಕಿನ ಯಲಬುರ್ಗಿ ಗ್ರಾಮದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಭಜನೆ,ರಾಮಕೋಟಿಯನ್ನು ಪ್ರಸಾದವಿನಿಯೋಗ ನಡೆಯಿತು.
ಈ ವೇಳೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಾದ ಲಕ್ಷ್ಮಣ್ ಮಾತನಾಡಿ,ಸುಮಾರು ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮ ಮಂದಿರದ ಕನಸು ನನಸಾಗಿದೆ ರಾಮಜನ್ಮ ಭೂಮಿಯ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಇಂದು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ಅಂಜನಪ್ಪ ಮಾತನಾಡಿ, ನಮ್ಮ ದೇಶದ ಕನಸು ಸುಮಾರು ವರ್ಷಗಳ ನಂತರ ನನಸಾಗಿದೆ, ಅಯ್ಯೋದ್ಯೆಯಲ್ಲಿ ಇಂದು ಶ್ರೀರಾಮ ಮಂದಿರದಲ್ಲಿ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ಶ್ರೀರಾಮನು ಸಮಸ್ತ ನಾಡಿನ ಜನತೆಗೆ ಉತ್ತಮ ಮಳೆ ಬೆಳೆ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಸ್ ಅರುಣ್,ಮೇಸ್ತ್ರಿ ಅಶೋಕ್,ವೆಂಕಟೇಶಪ್ಪ, ಆಂಜಪ್ಪ, ರವಿಕುಮಾರ್, ವಿಜಯಕುಮಾರ್ ಇನ್ನು ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ