ಪಿಎಸ್ಐ ದಿಲೀಪ್ಕುಮಾರ್ಗೆ ಸನ್ಮಾನ, ಉತ್ತಮವಾಗಿ ಕಾನೂನು ಸುವ್ಯವಸ್ಥೆ, ಟ್ರಾಫಿಕ್ ವ್ಯವಸ್ಥೆ ಕಾಪಾಡಿದ ಪಿಎಸ್ಐ
(CHIKKAMAGALURU): ಬಾಳೆಹೊನ್ನೂರು: ಇತ್ತೀಚೆಗೆ ನಡೆದ ದುರ್ಗಾದೇವಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪಟ್ಟಣದಲ್ಲಿ ಉತ್ತಮವಾಗಿ ಕಾನೂನು ಸುವ್ಯವಸ್ಥೆ, ಟ್ರಾಫಿಕ್ ವ್ಯವಸ್ಥೆ ಕಾಪಾಡಿದ ಪಿಎಸ್ಐ ವಿ.ಟಿ.ದಿಲೀಪ್ಕುಮಾರ್ ಅವರನ್ನು ಶನಿವಾರ ದುರ್ಗಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ದುರ್ಗಾ ಉತ್ಸವದಲ್ಲಿ ಈ ಬಾರಿ ಇಷ್ಟು ವರ್ಷಕ್ಕಿಂತ ಹೆಚ್ಚು ಭಕ್ತರು ಭಾಗವಹಿಸಿದ್ದು, ಹತ್ತು ದಿನಗಳ ಕಾಲ ಪೊಲೀಸ್ ಇಲಾಖೆಯವರು ಉತ್ತಮವಾಗಿ ಸಹಕಾರ ನೀಡಿ ಯಾವುದೇ ಗೊಂದಲಗಳು ಏರ್ಪಡದಂತೆ, ಕಾನೂನು ಸುವ್ಯವಸ್ಥೆ, ಟ್ರಾಫಿಕ್ ವ್ಯವಸ್ಥೆ ಅಚ್ಚುಕಟ್ಟಾಗಿ ಕಾಪಾಡುವಂತೆ ಮಾಡಿದ್ದರು. ಇವರ ಕಾರ್ಯ ಮಾದರಿಯಾಗಿತ್ತು ಎಂದು ಸಮಿತಿ ಸದಸ್ಯರು ಶ್ಲಾಘಿಸಿದರು.
ಸಮಿತಿಯ ಅಚ್ಚುಕಟ್ಟುತನ, ಸಹಕಾರದಿಂದ ಉತ್ತಮವಾಗಿ ಕಾನೂನು ವ್ಯವಸ್ಥೆ ಕಾಪಾಡಲು ಸಾಧ್ಯವಾಯಿತು. ಆಗಮಿಸಿದ ಭಕ್ತರು, ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಉತ್ತಮವಾಗಿ ಸಹಕರಿಸಿದರು ಎಂದು ಪಿಎಸ್ಐ ದಿಲೀಪ್ಕುಮಾರ್ ತಿಳಿಸಿದರು.
ಪಿಎಸ್ಐ ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಮಿತಿಯ ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷೆ ಪ್ರಸನ್ನಾ ಜಿ.ಭಟ್, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಸದಸ್ಯರಾದ ರೆನ್ನಿ ದೇವಯ್ಯ, ಪ್ರಶಾಂತ್ಕುಮಾರ್, ಮಂಜು ಹೊಳೆಬಾಗಿಲು, ಈಶ್ವರ್ ಇಟ್ಟಿಗೆ, ಬಿ.ಎಚ್.ಮನುಕುಮಾರ್, ಶ್ರೀಕಾಂತ್, ಶ್ರೀಕೃಷ್ಣಭಟ್, ಉಪೇಂದ್ರ, ಮಣಿಕಂಠನ್, ಎಚ್.ಗೋಪಾಲ್ ಮತ್ತಿತರರು ಇದ್ದರು.