ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದ ವತಿಯಿಂದ ಬಾಳೆಹೊನ್ನೂರು ಭಕ್ತಿ ಸಂಭ್ರಮ 2024: ಕೇಂದ್ರ ಬಿಂದುವಾದ ಚೈತನ್ಯ ವೆಂಕಿ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಬಲಮುರಿ ಗಣಪತಿ ದೇವಸ್ಥಾನದಲ್ಲಿ ಬಾಳೆಹೊನ್ನೂರು ಭಕ್ತಿ ಸಂಭ್ರಮ 2024 ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಮತ್ತು ದೀಪಾರಾಧನೆ ಕಾರ್ಯಕ್ರಮವನ್ನ ಚೈತನ್ಯ ವೆಂಕಿಯವರು ಆಯೋಜಿಸಿದರು. ಬಾಳೆಹೊನ್ನೂರಿನ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ನೋಡುವಂತಾಯಿತು.
ಬಾಳೆಹೊನ್ನೂರಿನಲ್ಲಿ ಒಳ್ಳೆಯ ಮನಸುಗಳು ಹೆಚ್ಚು ಇರುವುದರಿಂದ ಇಂದಿಗೂ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದೆ. ಅದೇ ರೀತಿ ದೇವಸ್ಥಾನಗಳಿಗೆ ಬರುವ ಭಕ್ತಾದಿಗಳು ದೇವಸ್ಥಾನದ ಹಳೆಯ ಪದ್ಧತಿಯಂತೆ ಪ್ಲಾಸ್ಟಿಕ್ ತ್ಯಜಿಸಿ ಬುಟ್ಟಿ ತಾಂಬೂಲದಲ್ಲಿ ಹಣ್ಣು ಕಾಯಿಯನ್ನು ದೇವಸ್ಥಾನಕ್ಕೆ ತರುವುದರಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿಸಬಹುದು ಎಂದು ಕಾರ್ಯಕ್ರಮದ ಉದ್ಘಾಟಕರಾದ ಎ.ಜಿ ದಿವಿನ್ ರಾಜ್ ರವರು ತಿಳಿಸಿದರು.
ಕಸದ ರಾಶಿ ಬಾಳೆಹೊನ್ನೂರನಲ್ಲಿ ಹೆಚ್ಚಿದೆ ಇದೇ ರೀತಿ ಮುಂದು ವರೆದರೆ ಹೆಚ್ಚು ಹೆಚ್ಚು ಪರಿಸರ ಮಾಲಿನ್ಯ ವಾಗುತ್ತದೆ, ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ಬರ ಪೀಡಿತ ಪ್ರದೇಶಗಳು ಹೆಚ್ಚಾಗುವುದು ಆದ್ದರಿಂದ ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಯಜ್ಞಪುರುಷ ಭಟ್ ರವರು ಈ ಸಂದರ್ಭದಲ್ಲಿ ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಜನ ಸೇರುವುದು ಬಾಳೆಹೊನ್ನೂರಿನಲ್ಲಿ ಒಳ್ಳೆ ಮನಸ್ಸುಗಳ ಒಕ್ಕೂಟದ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಧ್ಯಕ್ಷರು ಒಂದು ಕಡೆಗೆ ಸೇರುವಂತೆ ಮಾಡಿದ್ದ ಚೈತನ್ಯ ವೆಂಕಿಯನ್ನು ಬಂದಂತ ಎಲ್ಲಾ ಸಂಘ ಸಂಸ್ಥೆಗಳು ಅಧ್ಯಕ್ಷರು ಕೇಂದ್ರಬಿಂದುವನ್ನಾಗಿಸಿದರು. ವೆಂಕಿಯವರ ಈರೀತಿಯ ಕಾರ್ಯಕ್ರಮಗಳು ಇದ್ದೆ ರೀತಿ ಮುಂದುವರೆಯಲಿ ಎಂದು ಭಾಸ್ಕರ್ ವೆನಿಲ್ಲಾ ನುಡಿದರು.
ಬಾಳೆಹೊನ್ನೂರು ಭಕ್ತಿ ಸಂಭ್ರಮ 2024 ಹಾಗೂ ಶ್ರೀ ಸತ್ಯನರಾಯಣ ಪೂಜೆ ಮತ್ತು ದೀಪಾರಾಧನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಹೆಚ್. ಗೋಪಾಲ್, ಉದ್ಘಾಟನೆ ಎ.ಜಿ ದಿವಿನ್ ರಾಜ್, ಎಂ.ಆರ್ ವೆಂಕಪ್ಪ ಗೌಡರು, ಚಾಲನೆ ಟಿ.ಆರ್ ಯೋಗೇಂದ್ರ, ಸ್ಮರಣೆಗೆ ಅನಾವರಣ ಕೆ.ಕೆ ವೆಂಕಟೇಶ್, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಟಿ ಎಂ ಉಮೇಶ್ ಕಲ್ಮಿಕಿ, ಭಾಸ್ಕರ್ ವೆನಿಲ್ಲಾ, ಟಿ ಆರ್ ಧರ್ಮಪ್ಪಗೌಡ, ಎಚ್ ಡಿ ನಾಗೇಶ್ ಹೆಗಡೆ, ಯಜ್ಞಪುರುಷ ಭಟ್, ಎಆರ್ ಸುರೇಂದ್ರ, ಎಂ ಶಶಿಧರ್, ಎಂ ಡಿ ಶಿವರಾಮ್, ಹೆಚ್.ಹೆಚ್ ಕೃಷ್ಣಮೂರ್ತಿ, ಸತೀಶ್ ಅರಳಿಕೊಪ್ಪ, ಸಂದೇಶ್, ಡಿ.ಎನ್ ಜಗದೀಶ್, ವಿಜಯಲಕ್ಷ್ಮಿ, ಮತ್ತಿತರರು ಪಾಲ್ಗೊಂಡಿದ್ದರು.