ನ್ಯೂಸ್ಶಿವಮೊಗ್ಗ

ಬಳ್ಳಿಗಾವಿ ಶ್ರೀ ದಕ್ಷಿಣಕೇದಾರೇಶ್ವರ ಸ್ವಾಮಿ ರಥೋತ್ಸವ

ಬಳ್ಳಿಗಾವಿ ಶ್ರೀ ದಕ್ಷಿಣಕೇದಾರೇಶ್ವರ ಸ್ವಾಮಿ ರಥೋತ್ಸವ

(SHIVAMOGA): ಶಿರಾಳಕೊಪ್ಪ: ದಕ್ಷಿಣದ ಕೇದಾರನಾಥ ಎಂದು ಕರೆಸಿಕೊಳ್ಳುವ ಇತಿಹಾಸ ಪ್ರಸಿದ್ಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣಕ್ಕೆ ಸಮೀಪದ  ಬಳ್ಳಿಗಾವಿಯ ಶ್ರೀ ದಕ್ಷಿಣಕೇದಾರೇಶ್ವರ ಸ್ವಾಮಿ ರಥೋತ್ಸವವು ಶುಕ್ರವಾರ ವಿವಿಧ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.


ಹರಹರ ಮಹಾದೇವ ಎಂದು ಘೋಷಣೆ ಕೂಗುತ್ತ ಭಕ್ತಾದಿಗಳು ರಥ ಎಳೆದರು.  ರಥಕ್ಕೆ ಬಾಳೆಹಣ್ಣು, ಕಾಳುಮೆಣಸು ಎಸೆದು ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು. ಸುತಮುತ್ತಲಿನ ಗ್ರಾಮಗಳು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುವ ಬಳ್ಳಿಗಾವಿ ಆಲ್ಲಮಪ್ರಭುಗಳ ಜನ್ಮಸ್ಥಳವೂ ಹೌದು. ಹೊಯ್ಸಳ ರಾಜ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ತವರುಮನೆ. ಹೊಯ್ಸಳ ಶೈಲಿಯ ಕೇದಾರೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೂರು ಬದಿಯ ಪ್ರವೇಶದ್ವಾರವಿರುವ ಪೂರ್ವಕ್ಕೆ ಮುಖಮಾಡಿರುವ ದೇವಾಲಯವು ಪಕ್ಕದಲ್ಲಿ ಪಶ್ಚಿಮ ಚಾಲುಕ್ಯರ ಭಾಷಾವೈಶಿಷ್ಟ್ಯವನ್ನು ಹೊಂದಿದೆ.

ಕಪ್ಪು ಅಮೃತಶಿಲೆಯಿಂದ ಮಾಡಲ್ಪಟ್ಟ ಶಿವಲಿಂಗವನ್ನು ಮಧ್ಯ ದೇಗುಲದಲ್ಲಿ ಇರಿಸಲಾಗಿದೆ. ದಕ್ಷಿಣದಲ್ಲಿರುವ ದೇಗುಲವು ಬ್ರಹ್ಮ ಎಂಬ ಶಿವಲಿಂಗವನ್ನು ಹೊಂದಿದೆ ಮತ್ತು ಉತ್ತರದಲ್ಲಿರುವ ದೇವಾಲಯವು ಸರ್ವೋಚ್ಚ ಭಗವಾನ್ ವಿಷ್ಣುವಿನ ಜನಾರ್ದನ ಪ್ರತಿಮೆಯನ್ನು ಹೊಂದಿದೆ.
ಭಗವಾನ್ ಶಿವನ ಕೇದಾರೇಶ್ವರ ದೇವಾಲಯದಿಂದಾಗಿ, ಬಳ್ಳಿಗಾವಿಯು ದಕ್ಷಿಣ ಕೇದಾರ ಅಥವಾ ದಕ್ಷಿಣ ಕೇದಾರ ಎಂದರೆ ದಕ್ಷಿಣದ ಕೇದಾರನಾಥ ಮತ್ತು ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಮತ್ತು ವರ್ಷವಿಡೀ ಸಾವಿರಾರು ಭಕ್ತರನ್ನು ಹೊಂದಿದೆ.

ವರದಿ: ಸಂದೀಪ ಯು.ಎಲ್. ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ

Leave a Reply

Your email address will not be published. Required fields are marked *

Scan the code