ವಿವಿಧ ಸಂಘಟನೆಗಳಿಂದ ಎಂಎಲ್ ಹಳ್ಳಿಯಲ್ಲಿ ಬಿದಿರು ಬೆಳೆ ಕಾರ್ಯಗಾರ
(SHIVAMOGA): ಸಾಗರ ಹವ್ಯಕ ಅಭಿವೃದ್ಧಿ ಪ್ರತಿಷ್ಠಾನ (ರಿ) ಕೆಳದಿ ಸೀಮೆ, ಎಂ.ಎಲ್. ಹಳ್ಳಿಯ ಶ್ರೀ ಗಂಗಾ ವಿಶ್ವೇಶ್ವರ ಸೇವಾ ಪ್ರತಿಷ್ಠಾನ(ರಿ), ಶ್ರೀಧರಪುರ ಗೌರಮ್ಮ ಲಕ್ಷ್ಮಯ್ಯ ಟ್ರಸ್ಟ್ ವತಿಯಿಂದ ಮೇ 15ರಂದು ಎಂ.ಎಲ್. ಹಳ್ಳಿಯ ಎಲ್.ಟಿ. ತಿಮ್ಮಪ್ಪ ಹೆಗಡೆ ಸಭಾ ಭವನದಲ್ಲಿ ಬಿದಿರು ಬೆಳೆಯ ಕುರಿತು ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 4 ಗಂಟೆಯಿಂದ ನಡೆಯುವ ಕಾರ್ಯ್ರಮದಲ್ಲಿ ಕಣಜ ಬಿದಿರು ಬೆಳೆಗಾರ ಸಂಘದ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಭಟ್ ಕರ್ಕಿಕೊಪ್ಪರವರು ಬಿದಿರು ಬೆಳೆಯುವ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಣಜ ಟ್ರಸ್ಟಿನವರು ಎಕರೆಗೆ 60 ಸೀಮೆ ಬಿದಿರು ಸಸಿ ವಿತರಿಸಲಿದ್ದಾರೆ. ಜಮೀನಿನ ಪಹಣಿ, ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಬುಕ್ ನಕಲು, ಅರಣ್ಯ ಇಲಾಖೆಯ ಸಸ್ಟೇನಬಲ್ ಪ್ರಮಾಣ ಪತ್ರಗಳನ್ನು ಆಸಕ್ತ ರೈತರು ಒದಗಿಸಬೇಕಾಗುತ್ತದೆ. ಆಸಕ್ತರು ಆಗಮಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ.ರಾಘವೇಂದ್ರ ತಾಳಗುಪ್ಪ