ಕೋಲಾರನ್ಯೂಸ್

ಮೇ 20 ರಿಂದ ಬಂಗಾರಪೇಟೆ ಜಾತ್ರೆ ಹಾಗೂ ಕರಗ ಮಹೋತ್ಸವ ಪ್ರಾರಂಭ

ಮೇ 20 ರಿಂದ ಬಂಗಾರಪೇಟೆ ಜಾತ್ರೆ ಹಾಗೂ ಕರಗ ಮಹೋತ್ಸವ ಪ್ರಾರಂಭ

(KOLARA): ಬಂಗಾರಪೇಟೆ: ಬಂಗಾರಪೇಟೆ ಕರಗ ಇಡೀ ನಾಡಿನಲ್ಲೆ ಪ್ರಸಿದ್ಧಿಯನ್ನು ಹೊಂದಿದ್ದು ಸುಮಾರು 80ವರ್ಷಗಳ ಇತಿಹಾಸವನ್ನು ಹೊಂದಿದೆ,ತಾಲ್ಲೂಕು ಗಡಿಭಾಗಕ್ಕೆ ಹತ್ತಿರ ಇರುವುದರಿಂದ ಅಕ್ಕ ಪಕ್ಕದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕರಗದ ಮೆರೆಗನ್ನು ಹೆಚ್ಚಿಸುತ್ತಾರೆ ಆದರೆ ಈ ಬಾರಿ ಬಹಳ ವಿಜೃಂಭಣೆಯಿಂದ ಮೇ 20ರಿಂದ 26ರ ತನಕ ನಡೆಯುವ ಕರಗ ಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲು ಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಶ್ರೀ ಧರ್ಮರಾಯ ಸ್ವಾಮಿ ಸೇವಾಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ರಾಮಮೂರ್ತಿ ಹೇಳಿದರು.

ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪೇಟೆ ಪಟ್ಟಣ ಈಗ ಬಹಳ ದೊಡ್ಡದಾಗಿ ನಿರ್ಮಾಣವಾಗಿರುವ ಕಾರಣ ಹೂವಿನ ಕರಗ ದಿನದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾತ್ರ ಹೂವಿನ ಕರಗ ಸಂಚರಿಸಲಾಗುವುದು ಮರುದಿನ ಸಂಜೆ 6:00ಯ ಒಳಗೆ ಹೂವಿನ ಕರಗ ಅಗ್ನಿಕುಂಡವನ್ನು ಪ್ರವೇಶಿಸಬೇಕು ಆದರಿಂದ ಭಕ್ತಾದಿಗಳು ಹಾಗೂ ಪಟ್ಟಣದ ಸಾರ್ವಜನಿಕರು ಸಹಕರಿಸಬೇಕೆಂದು ಸಮಿತಿಯ ಎಲ್ಲಾ ಸದಸ್ಯರು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಸಮಿತಿ ಉಪಾಧ್ಯಕ್ಷರಾದ ಚಿನ್ನಿ ವೆಂಕಟೇಶ್ ಮಾತನಾಡಿ, ಕರಗ ಮಹೋತ್ಸವದ ಕಾರ್ಯಕ್ರಮಗಳು 20ರಂದು ಧ್ವಜರೋಹಣ,21ರಂದು ಆರತಿ ದೀಪೋತ್ಸವ,22ರಂದು ಹಸಿಕರಗ,23ರಂದು ಸೇಲಂ ನಗರ ಬಳಿ ಪೂಜೆ ಉಟ್ಲು ಜಾತ್ರೆ,24ರಂದು ಬೆಳಿಗ್ಗೆ ಕಲ್ಯಾಣೋತ್ಸವ ರಾತ್ರಿ 8ಕ್ಕೆ ಹೂವಿನ ಕರಗ,25 ರಂದು ಅಗ್ನಿಕುಂಡ ಪ್ರವೇಶ,26ರಂದು ವಸಂತೋತ್ಸವ ಇರುತ್ತದೆ.ಪ್ರತಿವರ್ಷದಂತೆ ಈ ವರ್ಷ ಕೂಡ ಲೋಕ ಕಲ್ಯಾಣಕೋಸ್ಕರ ಹಾಗೂ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದುರು. ಕರಗ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ನಾಡಿನ ಜನತೆ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕುಲದ ಗೌಡರು ಜಯರಾಂ.ಯಜಮಾನರು ಹಾಗೂ ಕುಲದ ಮುಖಂಡರು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code