ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್ ಬಂಗಾರಪ್ಪ ಅವರ 90 ನೇ ಜನ್ಮ ದಿನಾಚರಣೆ
(SHIVAMOGA): ಸಾಗರದ ಕುಗ್ವೆ ಗ್ರಾಮದಲ್ಲಿ ನಡೆದ ಅದ್ದೊರಿ ಕಾರ್ಯ ಕ್ರಮ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್ ಬಂಗಾರಪ್ಪ ಅವರ 90 ನೇ ಜನ್ಮ ದಿನಾಚರಣೆ ಯನ್ನು ಗ್ರಾಮಬೀವ್ರದ್ದಿ ಸಮಿತಿ. ಯುವಕ ಸಂಘ. ಶ್ರೀ ಎಸ್ ಬಂಗಾರಪ್ಪ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಅದ್ದೊರಿಯಾಗಿ ಸಾಗರದ ಕುಗ್ವೆ ಗ್ರಾಮದಲ್ಲಿ ಆಚರಿಸಲಾಯಿತು.
ಇದೆ ಸಂದರ್ಭದಲ್ಲಿ ರಸಮಂಜರಿ ಕಾರ್ಯ ಕ್ರಮವನ್ನು ಅಯೊಜನೆ ಮಾಡಲಾಗಿತ್ತು ಹಾಗೂ ಲಘು ಉಪಹಾರ ವ್ಯವಸ್ಥೆ ಕೊಡಾ ಮಾಡಲಾಗಿತ್ತು. ವಿಶೇಷವಾಗಿ ಗ್ರಾಮದ ಯುವಕ ಬಂಗಾರಪ್ಪ ಅವರ ಧ್ವನಿ ಯಲ್ಲಿ ನೆರೆದಿದ್ದ ಗ್ರಾಮಸ್ಥರಿಗೆ ಸಂದೇಶವನ್ನು ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ .ಶಿವಾನಂದ ಕುಗ್ವೆ ಮಾತನಾಡಿ ಬಂಗಾರಪ್ಪ ನಾಡು ಕಂಡ ಅಪರೂಪದ ರಾಜಕಾರಣಿ ವರ್ಣ ರಂಜಿತ ರಾಜಕಾರಣಿ. ಅವರು ನೀಡಿದ ಯೊಜನೆಗಳಿಂದ ಇಂದಿಗೂ ಹಲವಾರು ಕುಟುಂಬ ನೆಲೆ ನಿಂತಿದೆ.ಆಗಿನ ಕಾಲದಲ್ಲಿ 10 ಹೆಚ್.ಬಿ.ವಿದ್ಯುತ್ ಉಚಿತ ನೀಡಿದ ಮಹಾನ ನಾಯಕ ಎಂದು ಹೆಳಿದರು.
ಕಾರ್ಯ ಕ್ರಮದಲ್ಲಿ ನಾಗರಾಜ್ ಕುಗ್ವೆ, ಅಧ್ಯಕ್ಷರು ಯುವಕ ಸಂಘ, ಈಶ್ವರ ಬಂಡಿ, ಈಶ್ವರ ನಾಯ್ಕ, ಮಹಾಬಲೇಶ್ವರ, ಚ್ಯೆತ್ರಾ ರಮೇಶ್ , ಗೀತಾ ರಾಮಾಪ್ಪ, ಶಾರಾದ ನಾಗರಾಜ್, ಮನೋಜ್ ಕುಗ್ವೆ ಹಾಗೂ ಇನ್ನಿತರು ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ