ಐತಿಹಾಸಿಕ ಪಂರಂಪರೆಯನ್ನು ಮೇಲೈಸುವ ಬ್ಯಾಟರಾಯಣ ಸ್ವಾಮಿ ಜಾತ್ರಾ ಮಹೋತ್ಸವ
(KOLARA): ಬಂಗಾರಪೇಟೆ:ಐತಿಹಾಸಿಕ ಪಂರಂಪರೆಯನ್ನು ಮೇಲೈಸುವ ಬ್ಯಾಟರಾಯಣ ಸ್ವಾಮಿ ಜಾತ್ರಾ ಮಹೋತ್ಸವವು ಅಸ್ಮಿತೆಯನ್ನು ಉಳಿಸಿಕೊಂಡು ಸಾಮರಸ್ಯದ ಬೇಸುಗೆಗೆ ವೇದಿಕೆಯಾಗಿದೆ ಈ ಜಾತ್ರೆಯಲ್ಲಿ ಜಾತಿ, ವರ್ಗ ಭೇದವಿಲ್ಲದೆ ಜನರು ಒಂದೆಡೆ ಸೇರಿ ಸಂಭ್ರಮಿಸುವುದರ ಜೊತೆ ಜೊತೆಗೆ ದೇವರ ಅನುಗ್ರಹಕ್ಕೆ ಪಾತ್ರರಾಗುವುದರ ಮೂಲಕ ಧಾರ್ಮಿಕ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ತಿಳಿಸಿದರು.
ಡಿ.ಕೆ. ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಟರಾಯಣ ಸ್ವಾಮಿ ಜಾತ್ರೆಯ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಸಾರ್ವಜನಿಕ ಇಷ್ಟಾರ್ಥ ಸಿದ್ಧಿಗಾಗಿ ಅನಾದಿ ಕಾಲದಿಂದಲೂ ಬ್ಯಾಟರಾಯಣ ಸ್ವಾಮಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಈ ಮಹೋತ್ಸವದಲ್ಲಿ ಬಡವ-ಶ್ರೀಮಂತ ವ್ಯತ್ಯಾಸ ಇಲ್ಲ. ಬಾಹ್ಯ ರಥವನ್ನು ಎಲ್ಲರೂ ಸೇರಿ ಎಳೆಯುವುದರ ಮೂಲಕ ಸಮಾನತೆ ಮತ್ತು ಐಕ್ಯತೆಯ ಸಂದೇಶ ಸಾರುವಂತಾಗುತ್ತದೆ ಎಂದರು.
ಮಾನವನ ಧಾರ್ಮಿಕ ಬದುಕು ಮತ್ತು ಆಧುನಿಕ ಜೀವನ ಶೈಲಿಯನ್ನು ಸಮೀಕರಿಸುವ ರೂಪಕ:
ಮಾನವ ಅಧುನಿಕತೆ ಮತ್ತು ಜಾಗತೀಕರಣದ ಬರಾಟೆಯ ಒತ್ತಡದಲ್ಲಿ ನಲುಗಿ ತನ್ನ ಜೀವನ ಶೈಲಿ ಬದಲಿಸಿಕೊಂಡರೂ ಸಹ ಜಾತ್ರೆಯ ಮೂಲಕ ಧಾರ್ಮಿಕ ಆಚರಣೆ ವಿಧಿವಿಧಾನ ಪೂಜಾಕೈಂಕಾರ್ಯಗಳಲ್ಲಿ ಭಾಗವಹಿಸುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಜಾತ್ರೆಯ ವಿಶೇಷತೆಗಳು.
ಸಿಂಗಾರ ಗೊಂಡ ರಥದಲ್ಲಿ ಸರ್ವಾಂಲಕಾರಗಳೊಂದಿಗೆ ಬ್ಯಾಟರಾಯಣ ಸ್ವಾಮಿ ಪ್ರಜವಲಿಸುತ್ತಿದ್ದರೆ ಸಹಸ್ರಾರು ಭಕ್ತರು ಜೈ ಘೋಷಗಳೊಂದಿ ಸಕಲ ವಾದ್ಯಗಳೊಂದಿಗೆ ರಥ ಎಳೆದರು, ಮತ್ತೊಂದೆಡೆ ಆಟಿಕೆ ಸಾಮಾನುಗಳು, ಸಿಹಿ ತಿಂಡಿ ಮಳಿಗೆಗಳು ಕಾಣಸಿಕ್ಕವು, ತಮಟೆ ಡೋಲು ವಾದ್ಯಗಳು ಜೆಂಕರಿಸುತ್ತಿತ್ತು, ಪಂಚಾಯಿತಿ ವತಿಯಿಂದ ಭಕ್ತಾಧಿಗಳಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್ ಪಿ ಎಸ್ ಐ ರಾಜಣ್ಣ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನೀಡಲಾಗಿತ್ತು .
ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ವಿ.ಮಹೇಶ್, ಜೆ ಡಿ ಎಸ್ ತಾಲೂಕು ಅಧ್ಯಕ್ಷ ಮುನಿರಾಜು ಗ್ರಾಮ ಪಂಚಾಯಿತಿ ಸದಸ್ಯ ಸವಿತಾ ಬಾಬು ,ಕೆ ಎಚ್ ಮುನಿಯಪ್ಪ, ಗ್ರೇಡ್ 2 ತಹಸೀಲ್ದಾರ್ ಗಾಯಿತ್ರಿ, ಉಪ ತಹಸೀಲ್ದಾರ್ ಪ್ರಭಾಕರ್, ಪಿಡಿಓ ಭಾಸ್ಕರ್, ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ