ಸೌಂದರ್ಯ ಅಡಗಿರುವುದು ನೋಡುಗರ ಕಣ್ಣಲ್ಲಿದೆ -ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ
(SHIVAMOGA): ಸೊರಬ – ಭೌತಿಕವಾಗಿ ರೂಪವಂತರಾಗಿದ್ದರೂ ಆಂತರಿಕವಾಗಿ ದ್ವೇಷ, ಅಸೂಯೆ ವ್ಯಕ್ತಿತ್ವ ಹೊಂದಿದವರು ಚಿನ್ನಾಭರಣ ಮತ್ತು ಉತ್ತಮ ಧಿರಿಸುಗಳನ್ನು ಧರಿಸಿದ ಮಾತ್ರಕ್ಕೆ ಸೌಂದರ್ಯ ಉಳ್ಳವರು ಎನ್ನಲಾಗುವುದಿಲ್ಲ. ಸೌಂದರ್ಯವು ನಮ್ಮ ನೋಟದ ದೃಷ್ಟಿಕೋನದಲ್ಲಿದ್ದು, ಸೌಜನ್ಯ ಆದರಿಸುವ ಸತ್ಕರಿಸುವ ಗುಣಗಳನ್ನು ಜೋಡಿಸಿಕೊಂಡವರೇ ರೂಪವಂತರು ಎಂದು ಜಡೆ ಹಿರೇಮಠ-ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ ಮಂಗಳವಾರ 113ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಗುಣಕ್ಕೆ ಆಭರಣ ಜ್ಞಾನ, ರೂಪಕ್ಕೆ ಆಭರಣ ಗುಣ, ಜ್ಞಾನಕ್ಕೆ ಆಭರಣ ಕ್ಷಮ ಗುಣಗಳಾಗಿದ್ದು, ಇವುಗಳನ್ನು ಆಳವಡಿಸಿಕೊಳ್ಳುವುದರ ಮೂಲಕ ನಮ್ಮ ಜೀವನವನ್ನು ಸುಂದರವಾಗಿಸಿ ಕೊಳ್ಳಬೇಕು. ಪ್ರತಿಯೊಬ್ಬರೂ ನಾನು ನನ್ನದು ಎಂಬ ಅಹಂಕಾರ ಬಿಡಬೇಕು. ಅತಿಯಾದ ದುರಾಸೆ ಮನುಷ್ಯನನ್ನು ದುರ್ಬಲಗೊಳಿಸುತ್ತವೆ, ಆದ್ದರಿಂದ ಸರಳ ಬದುಕನ್ನು ರೂಪಿಸಿಕೊಂಡು ಮಾನವೀಯ ಗುಣಗಳೊಂದಿಗೆ ಬದುಕಬೇಕು ಎಂದರು.
ಯು.ಎನ್ ಲಕ್ಷ್ಮೀಕಾಂತ, ನಾಗರಾಜ ಗುತ್ತಿ, ರೇಖಾ ಜಗದೀಶ್, ಉಮಾ ಚಂದ್ರಶೇಖರ ಮಾತನಾಡಿದರು.
ಈ ಸಂದರ್ಭದಲ್ಲಿ ಸಮುದಾಯ ಭವನದ ಅಭಿವೃದ್ದಿಗೆ ನಿವೃತ್ತ ಅಂಗನವಾಡಿ ಶಿಕ್ಷಕಿ ಸುಶೀಲಮ್ಮ ಲಿಂಗರಾಜ ರೂ.5,001/- ಗಳ ಧನಸಹಾಯ ನೀಡಿದರು. ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪೂಜೆ ಹಾಗೂ ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು
ಡಿ. ಲಿಂಗರಾಜ್, ಚಂದ್ರಶೇಖರ ನಿಜಗುಣ, ಸಿ.ಬಿ ಉಮಾ, ಪುಷ್ಪಾ, ವನಜಾಕ್ಷಮ್ಮ, ಗಂಗಮ್ಮ, ಪಕ್ಕೀರಮ್ಮ, ರಮ್ಯ, ಸುನೀತಾ, ನಟರಾಜ ಉಪ್ಪಿನ, ಗಿರಿಜಾ, ಪಾರ್ವತಿ ಪೂರ್ಣಿಮಾ, ರತ್ನಮ್ಮ, ಗಾಯಿತ್ರಿ, ರೇವತಿ, ಶಶಿರೇಖಾ ಶಕುಂತಲಾ ಬಸವರಾಜ, ವಿನೋದ ವಾಲ್ಮೀಕಿ, ಸುನಂದಮ್ಮ, ನಾಗರಾಜ, ಪ್ರಕಾಶ, ಲಿಂಗರಾಜ, ರಾಜಶೇಖರ್, ವಿರೇಶ, ಮಂಜುನಾಥ ಮತ್ತಿತರರಿದ್ದರು.
ಸಂದೀಪ ಯು.ಎಲ್, ಸೊರಬ