ಬೇನಾಮಿ 2 ಲಕ್ಷ ರೂ ವಶ : ಚೂರಿಕಟ್ಟೆಯಲ್ಲಿ ಅಕ್ರಮ ವಹಿವಾಟು ನಡೆದ ಶಂಕೆ
(SHIVAMOGA): ಸಾಗರ : ತಾಲೂಕಿನ ಚೂರಿಕಟ್ಟೆ ಚೆಕ್ ಪೋಸ್ಟ್ ಬಳಿ ಮಹೀಂದ್ರಾ ಎಕ್ಸ್ ಯುವಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ ನಗದನ್ನು ಗುರುವಾರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ.
ನೀತಿ ಸಂಹಿತೆ ಘೋಷಣೆ ಬಳಿಕ ದಾಖಲೆ ಇಲ್ಲದೆ ಹಣ ಸಾಗಿಸಿ ಸಿಕ್ಕಿಹಾಕಿಕೊಂಡ ಮೊದಲ ಪ್ರಕರಣ ಇದಾಗಿದೆ. ಎಂಸಿಸಿ ನೋಡಲ್ ಅಧಿಕಾರಿಗಳಾದ ನಾಗೇಶ್ ಬ್ಯಾಲಾಳ್, ಮಹಮ್ಮದ್ ಹನೀಫ್, ಮಾಲಿನಿ, ವಿನಾಯಕ್, ಸಬ್ ಇನ್ಸ್ಪೆಕ್ಟರ್ ಹೊಳಬಸಪ್ಪ ಹೊಳಿ ಮುಂತಾದವರ ನೇತ್ರತ್ವದಲ್ಲಿ ತನಿಖೆ ನಡೆದಿದೆ.
ಇನ್ನು ಹೆಚ್ಚಿನ ಮಾಹಿತಿ ಬರಬೇಕಾಗಿದೆ….
ವರದಿ :ರಾಘವೇಂದ್ರ ತಾಳಗುಪ್ಪ