ಕೋಲಾರನ್ಯೂಸ್

ನಿದ್ರಾ ಹೀನ ಸ್ಥಿತಿಯಲ್ಲಿ ಬೆಸ್ಕಾಂ. ಸಾರ್ವಜನಿಕರಿಂದ ಹಿಡಿ ಶಾಪ.

ನಿದ್ರಾ ಹೀನ ಸ್ಥಿತಿಯಲ್ಲಿ ಬೆಸ್ಕಾಂ. ಸಾರ್ವಜನಿಕರಿಂದ ಹಿಡಿ ಶಾಪ.

(KOLARA): ಬಂಗಾರಪೇಟೆ: ತಾಲೂಕಿನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷತನ ಹಾಗೂ ನಿದ್ರಾಹೀನ ಸ್ಥಿತಿಯ ಮನೋಭಾವನೆಯಿಂದಾಗಿ ಪ್ರತಿನಿತ್ಯ ತಾಲೂಕಿನಾದ್ಯಂತ ವಿದ್ಯುತ್ ವ್ಯತೇಯ ಉಂಟಾಗುತ್ತಿದೆ ಇದರಿಂದ ಬೇಸತ್ತ ರೈತರು ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಇಡಿ ಶಾಪ ಹಾಕುತ್ತಿದ್ದಾರೆ.

ಇತ್ತೀಚಿಗೆ ಪಟ್ಟಣದಾದ್ಯಂತ ಪ್ರತಿನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತಿದ್ದು ದೈನಂದಿನ ಕಾರ್ಯ ಚಟುವಟಿಕೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ,

ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಅಸಮಾಧಾನ:
ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಹವಮಾನದ ವೈಪರಿತ್ಯದಿಂದ ವಿದ್ಯುತ್ ಸಮಸ್ಯೆ ಉಲ್ಬನ ವಾಗುವುದು ಸರ್ವೆಸಾಮಾನ್ಯ ಇದಕ್ಕೆ ಮುಂಜಾಗ್ರತ ಕ್ರಮ ವಹಿಸಬೇಕಾದ ಅಧಿಕಾರಿಗಳು ನಿದ್ರಾಹೀನ ಮನೋಭಾವನೆಯನ್ನು ಹೊಂದಿದ್ದ ಕಾರಣ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ ತೋರಿರುವುದರಿಂದ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆಗಳು ಉಲ್ಬನಗೊಂಡಿದೆ.
ಬರಗಾಲ ಪಿಡಿತ ಪ್ರದೇಶವಾದ ಬಂಗಾರಪೇಟೆ ತಾಲೂಕಿನಲ್ಲಿ ಇತ್ತೀಚೆಗೆ ಅಲ್ಪ ಪ್ರಮಾಣದ ಮಳೆ ಉಂಟಾದ ಕಾರಣ ಕೃಷಿ ಚಟುವಟಿಕೆಗಳು ಬರದಿಂದ ಸಾಗುತ್ತಿದೆ ಆದರೆ ಬೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ನೀರಿನ ಸಮಸ್ಯೆ ಉಲ್ಬಣಗೊಂಡು ರೈತರು ಪ್ರತಿಭಟನೆ ನಡೆಸಿದ ಪ್ರಸಂಗಗಳು ಕಾಣಬಹುದಾಗಿದೆ,



ಬೆಸ್ಕಾಂ ವಿರುದ್ಧ ಆರೋಪಗಳ ಸುರಿಮಳೆ:
ಇತ್ತೀಚೆಗೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿರುವುದು ಅತ್ಯಂತ ವಿಷಾದ ಸಂಗತಿ, ಒಂದು ಕಾಲದಲ್ಲಿ ಬಂಗಾರಪೇಟೆಯ ಬೆಸ್ಕಾಂ ಅಧಿಕಾರಿಗಳ ಕಾರ್ಯ ವೈಖರಿ ಮೆಚ್ಚುವಂತದ್ದಾಗಿತ್ತು ವಿಪರ್ಯಾಸ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಗತ್ಯವಿರುವ ಕಡೆಗೆ ಟ್ರಾನ್ಸ್ಫಾರ್ಮರ್ ಹಾಕದೆ ವಾಣಿಜ್ಯೋದ್ಯಮಿಗಳ ಕೋಳಿ ಫಾರಂ ಗಳಿಗೆ ಟ್ರಾನ್ಸ್ಫಾರ್ಮರ್ ನೀಡುತ್ತಿದ್ದಾರೆ ಎಂದು ರೈತ ಮುಖಂಡರು ಗಂಭೀರವಾಗಿ ಆರೋಪ  ಮಾಡಿ ರೈತ ಮುಖಂಡ ರಾಮೇಗೌಡರ ನೇತೃತ್ವದಲ್ಲಿ ಬೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿದರು.
ಹಾಗೂ ವರ್ಷಗಟ್ಟಲೆ ಟ್ರಾನ್ಸ್ಫಾರ್ಮರ್ ರಿಪೇರಿ ಆಗಿ ಬಿದ್ದ ಸ್ಥಳದಲ್ಲಿಯೇ ಬಿದ್ದಿದ್ದರೂ ಸಹ ಇತ್ತ ಕಡೆ ಗಮನ ಹರಿಸಿಲ್ಲ ಎಂದು ತುಮಟಗೇರೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ವಾರದ ಹಿಂದೆ ದೂರಿದ್ದರು ಇದರೊಟ್ಟಿಗೆ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡಲು ಮತ್ತು ಬೆಸ್ಕಾಂ ಕಚೇರಿಗೆ ಟ್ರಾನ್ಸ್ಫಾರ್ಮರ್ ರವಾಣಿಸಲು ಹಣದ ಬೇಡಿಕೆ ಇಟ್ಟಿರುವುದಾಗಿ ಆರೋಪ ಮಾಡಿದ್ದರು, ಈ ರೀತಿಯಾಗಿ ಅಧಿಕಾರಿಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವುದು ಮತ್ತು ತನ್ನ ಕರ್ತವ್ಯದ ಬಗ್ಗೆ ನಿರ್ಲಕ್ಷತನ ತೋರಿದ ಕಾರಣ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಇಡೀ ಶಾಪ ಹಾಕುತ್ತಿರುವುದೆಂತು ಅಕ್ಷರಶಃ ಸತ್ಯ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಸೇವೆಯನ್ನು ಮಾಡಲು ಮುಂದಾಗಬೇಕು ಎಂದು ಬಿಸಿ ಬಿಸಿ ಚರ್ಚೆಗಳು ಶುರುವಾಗಿದೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code