ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಾಳೆಹೊನ್ನೂರಿನ ಬಿ ಜಿ ಎಸ್ ವಿದ್ಯಾರ್ಥಿಗಳು
(ಬಾಳೆಹೊನ್ನೂರು) : ದಿನಾಂಕ ಸೆಪ್ಟೆಂಬರ್ 13 ಮತ್ತು14 ರಂದು ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಬಾಳೆಹೊನ್ನೂರಿನ ಬಿ.ಜಿ.ಎಸ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಹಿಲ್, ಪವನ್, ಅಭಿಲಾಷ್ ಹಾಗೂ ವಿಕ್ರಂ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಫುಟ್ ಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಕೃತಾರ್ಥ್, ಜೀವನ್, ವಿದ್ವಾನ್, ತೇಜಸ್, ಬ್ರಾಂಡನ್ ಹಾಗೂ ಸಿದ್ದೇಶ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅತ್ಲೇಟಿಕ್ಸ್ ವಿಭಾಗದ ತಟ್ಟೆ ಎಸೆತದಲ್ಲಿ ಕು|| ಸನಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, 100 ಮೀಟರ್ ಓಟದಲ್ಲಿ ದೀಕ್ಷಿತ್ ತೃತೀಯ ಸ್ಥಾನ ಹಾಗೂ 4×100 ರಿಲೇ ಓಟದಲ್ಲಿ ದೀಕ್ಷಿತ್ ಸ್ವಸ್ತಿಕ್ ಸಂಜನ್ ತೃತೀಯ ಸ್ಥಾನ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿಗಳವರು, ಪ್ರಾಚಾರ್ಯರಾದ ಡಾ ವೈ ಎ ಸುರೇಶ್ ಹಾಗೂ ಉಪನ್ಯಾಸಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.