ಚಿಕ್ಕಮಗಳೂರುನ್ಯೂಸ್

ಛಲ ಬಿಡದ ಭೀಮಾರ್ಮಿ, ಡಾ. ಬಿಆರ್ ಅಂಬೇಡ್ಕರ್ ಅವರ ಬೃಹತ್ ಪುತ್ಥಳಿಕೆ ಅನಾವರಣ.

ಛಲ ಬಿಡದ ಭೀಮಾರ್ಮಿ, ಡಾ. ಬಿಆರ್ ಅಂಬೇಡ್ಕರ್ ಅವರ ಬೃಹತ್ ಪುತ್ಥಳಿಕೆ ಅನಾವರಣ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಭಾರತ ಏಕತ್ ಮಿಶನ್ ಶೃಂಗೇರಿ ಕ್ಷೇತ್ರ, ಕಡ್ಲೆಮಕ್ಕಿ ಅವರ ಬಾಳೆಹೊನ್ನೂರು ಬಾಬಾ ಸಾಹೇಬ್ ಅಂಬೇಡ್ಕರ್ ರವರ 133ನೇ ಜಯಂತಿ ಹಾಗೂ ಬೃಹತ್ ಪುತ್ಥಳಿ ಅನಾವರಣ ಕಾರ್ಯಕ್ರಮ.

ಘೋಷಣೆಗಳ ಕೋಗುವುದರ ಮೂಲಕ ಆರಂಭಗೊಂಡ ಸ್ವಾಭಿಮಾನದ ಜಯಂತಿ ಆದರೆ ನಾವು ಎಲ್ಲಿಯ ಬಾಬಾ ಸಾಹೇಬ್ ಅಂಬೇಡ್  ಅವರನ್ನು ಹುಡುಕಲಿಕ್ಕೆ ಹೊರಟಿದ್ದೇವೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಮಗೆ ಏನಾದರೂ ಬೇಕಾಗಿದ್ದರೆ ನೀವು ನನ್ನನ್ನ ಮೂರ್ತಿಗಳಲ್ಲಿ ಹುಡುಕಬೇಡ್ರಿ. ನೀವು ನನ್ನನ್ನ ಫೋಟೋ ಬ್ಯಾನರ್ ಫ್ಲೆಕ್ಸ್ ಗಳಲ್ಲಿ ಹುಡುಕುವುದರಿಂದ ಪ್ರಯೋಜನವಿಲ್ಲ, ನೀವು ನನ್ನನ್ನು ಓದಿ ನಾನಲ್ಲಿದ್ದೇನೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದರ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಲ್ಲಿರುವರು.

ನಿಮ್ಮನ್ನ ಮನೆ ಹತ್ರ ಬಿಟ್ಕೊಳ್ದೆ ಇರೋ ಜನ , ನಿಮ್ಮನ್ನ ಗುಡಿ ಹತ್ತಿರನ್ನು ಬಿಡದಿರುವ ಜನರ ಮಧ್ಯ ಬದುಕಬೇಕಾಗಿದೆ ನಾವೆಲ್ಲರೂ,  ಸರ್ಕಾರಿ ನೌಕರಿ ಬಂದ್ರೂನೂ ದೇವರು ಕಾರಣ, ನೀವು ನಾಳೆ ಪಂಚಾಯಿತಿಯಲ್ಲಿ ಅಧ್ಯಕ್ಷರಾದರು ದೇವರು ಕಾರಣ, ಏನೇ ಆದ್ರೂ ಅದಕ್ಕೆ ದೇವರು ಕಾರಣ  ಮನುವಾದ ಮನು ಧರ್ಮ ಅಂತ ಹೇಳಿದ್ರೆ ವರ್ಣಾಶ್ರಮದ ಪದ್ಧತಿಗಳನ್ನ ವರುಣಾಶ್ರಮದ ನಿಯಮಗಳನ್ನ ಅನುಷ್ಠಾನ ಮಾಡೋದು ಮನದ ವ್ಯವಸ್ಥೆ ಪದಾತಿ. ಯಾರಿಗೆ ಸಂಸ್ಕೃತ ಬರುತ್ತದೆ ಯಾರು ಜನಿವಾರವನ್ನ ಹಾಕ್ಕೊಳ್ಳುತ್ತಾರೆ ಅವರೂ ತಲೆಯಿಂದ ಜನಿಸಿದವರು,  ಶೂದ್ರ ಆದಿವಾಸಿ ಜನಾಂಗನ ಪರಿಶಿಷ್ಟ ಪಂಗಡನ ಶೂದ್ರ ಅಲ್ಲ ನೀವು ಸರಿಯಾಗಿ ದೇಶದ ಇತಿಹಾಸವನ್ನು ತಿಳಿಕೊಳ್ಳಿ ವಚನ ಸಾಹಿತ್ಯ ಗಮನಿಸಿ. ಗೌಡ್ರು, ರೆಡ್ಡಿಗಳು ಇಂದಿನ ಬಣಜಿಗರು ಇಂದಿನ ಕುಂಬಾರರು ಎಲ್ಲರೂ ಕೂಡ ಶೂದ್ರರೇ, ವಿಜ್ಞಾನವನ್ನು ಬಲ್ಲೊರದಿರಿ ನಮ್ಮ ತಲೆಯಿಂದ ಜನಿಸಲು ಸಾಧ್ಯವೇ.

ಪಾದದ ಕೆಳಗಡೆಯಿಂದ ಹುಟ್ಟಿದವರಲ್ಲ ನಾವೆಲ್ಲ ನಮ್ಮ ಅಪ್ಪ ಅಮ್ಮನಿಗೆ ಹುಟ್ಟಿದೆವೆ ಹೀಗಾಗಿ ಇತಿಹಾಸ ಅಂತ ಹೇಳಿದ್ರೆ ತಾಯಿಯ ಗರ್ಭ ಇದ ಹಾಗೆ, ಮೂರು 3% ಇರುವವರು ನಮ್ಮನು ಹಾಳುತಿದ್ದಾರೆ. ಜಾಗೃತ ಗೊಂಡಿರುವ ಸಮಾಜ ಅರಮನೆಯಲ್ಲಿ ಕಾರ್ಯಕ್ರಮ ಮಾಡ್ತಾರೆ ನಾವು ಗಳು ಬೀದಿಗಳಲ್ಲಿ ಕಾರ್ಯಕ್ರಮ ಮಾಡ್ತೇವೆ.

ಇವತ್ತು ನಾವೆಲ್ಲ ಅಧಿಕಾರವನ್ನು ಪಡೆದುಕೊಂಡಿದ್ದೇವೆ. ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರತಕ್ಕಂಥ ಭಿಕ್ಷೆ ನಿಮಗೆ ಯಾವ ದೇವರು ನಿಮ್ಮನ್ನು ರಕ್ಷಣೆ ಮಾಡಲಿಕ್ಕೆ ಬರಲಿಲ್ಲ ಶತಶತಮಾನಗಳಿಂದ ಶಿಕ್ಷಣವನ್ನು ಕೊಡಲಿಲ್ಲ ನಿಜವಾಗ್ಲೂ ನಿಮಗೆ ಈ ದೇಶದಲ್ಲಿ ಕೊಟ್ಟವರು ನಿಮ್ಮನ್ನು ಗೌರವಿತವಾಗಿ ಬದುಕಲಿಕ್ಕೆ ಹಚ್ಚಿದವ್ರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತ್ರ, ಎಷ್ಟೋ ದಿನಗಳ ಕಾಲ ಬೆಲ್ಲದ ನೀರನ್ನು ಕುಡಿದು ಬದುಕುತ್ತಾರೆ.  ಕಾಲಘಟ್ಟದಲ್ಲಿ ನಾವೆಲ್ಲ ಕಲ್ಲಿನ ದೇವರುಗಳು ನಮಗೆ ತಂದು ಕೊಟ್ಟಿರೋದಲ್ಲ ನಮಗೆ ಆಶೀರ್ವಾದ ನಮಗೆ ಕೃಪೆ ಮಾಡಿರೋದು ನಮ್ಮ ಬೆನ್ನೆಲುಬಾಗಿ ನಿತ್ಕೊಂಡಿರೋದು ಬಾಬಾ ಸಾಹೇಬ್ ಹಾಗಾದ್ರೆ ಮುಂದಿನ ಪೀಳಿಗೆಗೆ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅಂದರೆ ಯಾರು ಅಂತ ಆಡಳಿತ ವ್ಯವಸ್ಥೆಗಳ ನಿರ್ಲಕ್ಷ ಪ್ರತಿಸಾರಿ ಏಪ್ರಿಲ್ ಬಂದಾಗ ಚುನಾವಣೆಗಳನ್ನ ನಡೆಸುತ್ತಾ ಇದ್ದಾರೆ. ದೇಶದಲ್ಲಿ ಈ ಮನುವಾದಿ ಕುತಂತ್ರ ಕಳ್ಳ ನನ್ನ ಮಕ್ಕಳು ಆಟ ನಡೆಯದಿಲ್ಲ ಅಂತ ಕಾರಣಕ್ಕೆ ಜಯಂತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಮನೆ ಮನೆಗಳಿಗೆ ಮನಮನೆಗಳಿಗೆ ವಿಶ್ವಗುರು ಬಸವಣ್ಣನವರ ಜಯಂತಿ ಬರುತ್ತದೆ. ಕಾರ್ಮಿಕರ ಜಯಂತಿ ಸಹ ಬರುತ್ತದೆ ಇದೆಲ್ಲ ಹಕ್ಕುಗಳ ಬಗ್ಗೆ ಚರ್ಚೆ ಅಥವಾ ಸಂವಿಧಾನದ ಬಗ್ಗೆ ಚರ್ಚೆ ಆಗುತ್ತವೆ ಎಂಬುದಕ್ಕೆ ಇದೊಂದು ದೊಡ್ಡ ಕಾರಣವಾಗಿದೆ.  ನೀವು ಇಷ್ಟು ಪ್ರಭುದ್ದವಾಗಿದ್ದೀರಾ ಸಂವಿಧಾನದ ಬಗ್ಗೆ ಮಾತಾಡ್ತೀರಾ ನೀವು ಜಾತಿನ ಪ್ರತಿಪಾದಿಸ್ತೀರಾ ಅಂತ ಹೇಳಿ ಜಾತಿ ಆಧಾರದ ಮೇಲೆ ತಾನೆ ಆಳುವವರು ನಮನ ಆದರೆ ಕೆಲವೊಂದು ಕಡೆ ತುಂಬಾ ತನ ಕರಾಳ ಮುಖವನ್ನು ತೋರಿಸ್ತಾ ಇದ್ದಾರೆ.  ಮೊನ್ನೆ ನಮ್ಮ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ನಡೆಯಿತು ರಾಜ್ಯದ್ಯಂತ ಪ್ರತಿಭಟನೆ ಕಿಚ್ಚು ಹಚ್ಕೊಂಡಿತ್ತು. ಆದರೆ ಅದೇ ಒಂದು ದಲಿತ ಮಹಿಳೆ ಸತ್ತರೆ ಈ ರೀತಿ ಪ್ರತಿಭಟನೆವಾಗುವುದು,  ಪ್ರತಿ ವರ್ಷ ಹೋಳಿ ಹುಣ್ಣಿಮೆ ಬಂದಾಗ ಒಂದು  ಬಂಡಿ ಮಾಡಿ ದೇವದಾಸಿ ಮಾಡಿ ಇಡೀ ಊರ್ ತುಂಬಾ ಮೆರವಣಿಗೆ ಮಾಡುತ್ತಿದ್ದರು ಬಣ್ಣದ ನೀರಿನಲ್ಲಿರಂಗೋಲಿ ಪುಡಿ ಬೆರೆಸಿ ಎರಚುವಾಗ ಆ ಬಣ್ಣದ ನೀರಲ್ಲಿ ಇದ್ದ ಸಣ್ಣ ಕಲ್ಲುಗಳು ಆ ದೇವದಾಸಿ ಮಹಿಳೆಯರಿಗೆ ಕಣ್ಣಿಗೆ ಬಿದ್ದು ಎಷ್ಟೋ ಜನರ ಕಣ್ಣುಗಳು ಹೋಗಿದ್ದಾವೆ.  ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದು ಹಿಂದೂ ಆಗಿ ಹುಟ್ಟಿದ್ದೇನೆ, ಆದರೆ ಹಿಂದೂ ಆಗಿ ಸಾಯಲಾರೆನು.

ನಮ್ಮನ್ನು ಗುಡಿ ಹಿಂದ ನಮ್ಮನ್ನು ಎಲ್ಲರಿಂದ ಆಚೆಗೆ ಇಡುತ್ತೀರಿ ನಾವ್ಯಾರು ಹಿಂದುಗಳಲ್ಲವೇ,  ನಾವು ಸಿಂಧು ನಾಗರಿಕತೆಯ ಹುಲಿಗಳು ನಾವು ಯಾರು ಹಿಂದುಗಳಲ್ಲ ಅಂಡ್ ಪ್ಯೂರ್ ದ್ರಾವಿಡೀನ್ ದ್ರಾವಿಡ ಜಮ್ಮು-ಕಾಶ್ಮೀರದ ಒಳಗಡೆ ಈ ದೇಶದ ನಾಗ ವಂಶಸ್ಥರು, ಈ ದೇಶದ ನಾಗ ಜನರು , ಈ ದೇಶದ ದ್ರಾವಿಡರು ನಾವೆಲ್ಲ ಈ ದೇಶವನ್ನು ಕಟ್ಟಿಕೊಂಡವರು. ಯಾವ ಧರ್ಮ ಗ್ರಂಥದಲ್ಲಿ ಸ್ತ್ರೀ ನಹಿ ಸ್ವಾತಂತ್ರ್ಯ ಅಂತ ಹೇಳಲಾಗಿತ್ತು, ಯಾವ ಧರ್ಮ ಶಾಸ್ತ್ರದಲ್ಲಿ ಹೆಣ್ಮಕ್ಕಳಿಗೆ ಅಧಿಕಾರವನ್ನು ನಿಷೇಧಿಸಲಾಗಿತ್ತು, ಯಾವ ಧರ್ಮಶಾಸ್ತ್ರದಲ್ಲಿ ಸ್ತ್ರೀಯರ ಎಲ್ಲಾ ಹಕ್ಕುಗಳನ್ನು ಗೌರವದ ಬದುಕನ್ನು ಕಿತುಕೊಂಡ ಅಂತಹ ಧರ್ಮಶಾಸ್ತ್ರದಲ್ಲಿ ಹುಟ್ಟಿರತಕ್ಕಂತಹ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಸಚಿವೆ ಆಗಿದರೆ. ಇಂತಹ ಸಂವಿಧಾನ ಇವತ್ತು ಅಪಾಯದಲ್ಲಿದೆ ಇಷ್ಟು ಜನರಿಗೆ ಗೌರವದ ಬದುಕನ್ನ ದಯಪಾಲಿಕೆ ಸಂವಿಧಾನ ಕೋಮುವಾದಿಗಳ ಕೈಯಲ್ಲಿದೆ ಅದಕ್ಕೆ ಬಾಬಾ ಸಾಹೇಬ್ ಸಂವಿಧಾನದ ಚರ್ಚಾ ಸಭೆಯಲ್ಲಿ ಹೇಳ್ತಾರೆ ನಾನು ಎಷ್ಟೇ ಅದ್ಭುತವಾಗಿ ಸಂವಿಧಾನವನ್ನು ಬರೆದಿರಬಹುದು ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಆಡಳಿತ ಮಾಡಿದರೆ ಮಾತ್ರ ಅದಕ್ಕೆ ಸಂವಿಧಾನ ಎನ್ನಲಾಗುವುದು.

ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ ನಂತರ ಸಂವಿಧಾನದ ಪ್ರತಿಗೆ ಹಣೆ ಹೆಚ್ಚಿ ನಮಸ್ಕಾರ ಮಾಡಿ ಒಳಗಡೆ ಹೋಗ್ತಾರೆ. ಒಳಗಡೆ ಕುತ್ಕೊಂಡು ಏನ್ ಹೇಳ್ತಾರೆ ಸಂವಿಧಾನ ಸರಿ ಇಲ್ಲ ಅಂತ ಸಂವಿಧಾನ ಬದಲಾವಣೆ ಮಾಡ್ಬೇಕು ಅಂತಾ ಹೇಳುತ್ತಾರೆ. ಕೋಮುವಾದಿಗಳ ದಾಳಿಗಳಿಂದ ಈ ದೇಶದ ಸರ್ವ ಶ್ರೇಷ್ಠ ಸಂವಿಧಾನ ಹೀಗಾಗಿ ಸಂವಿಧಾನ ಅನುಷ್ಠಾನ ಮಾಡೋ ಜಾಗದಲ್ಲಿ ಪ್ರಗತಿಪರವರು ಹೋಗಬೇಕಾಗಿದೆ.  ಸಂವಿಧಾನ ಅನುಷ್ಠಾನ ಮಾಡೋ ಜಾಗದಲ್ಲಿ ಬಹುತ್ವ ಭಾರತದ ಮಾನವೀಯತೆ ಉಳ್ಳವರು ಹೋಗಬೇಕಾಗಿದೆ. ಆದರೆ ಜಾತಿತೆಯಂತ್ರಾಗಿ ಧರ್ಮದ ಒಡಕ್ಕೆ ನಿಂತರಾಗಿ ಭಿನ್ನಾಭಿಪ್ರಾಯಗಳು ಉಳ್ಳವರು ಮಾಡುವರು.  ಗ್ರಂಥಾಲಯಗಳ ನಿರ್ಮಾಣ ಆಗಬೇಕಾಗಿರೋ ಜಾಗದಲ್ಲಿ ಮಂದಿರಗಳು ನಿರ್ಮಾಣ ಆಗ್ತಾ ಇದೆ ಅದಕ್ಕೆ ಯಾವ ದೇವರ ಗುಡಿ ಘಂಟೆ ಹೊಡೆದ್ರೆ ಭಾರತ ಉದ್ದಾರ ಆಗುತ್ತೆ ಬಿಡುತ್ತೋ ಗೊತ್ತಿಲ್ಲ ಶಾಲೆಗಂಟೆ ಹೊಡೆದಾಗ ಮಾತ್ರ ಭಾರತ ಉದ್ದಾರ ಆಗುತ್ತದೆ ಅಂತ ಮಾತ್ರ ದೇಶ ಅಭಿವೃದ್ಧಿ ಆಗ್ಲಿಕ್ಕೆ ಸಾಧ್ಯ, ಶಿಕ್ಷಣ ಇಲ್ಲದೆ ಇರೋದ್ರಿಂದ ದೇವಸ್ಥಾನಗಳಿಂದ ಭಾರತ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಎಂದು  ದಿಕ್ಸೂಚಿ ಭಾಷಣ ಮಾಡಿದಂತ ಕೆಸಿ ಅಕ್ಷತಾ ರವರು  ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಮತ್ತು ಅವರ ವಿಚಾರಧಾರೆಗಳನ್ನು ವಿಚಾರಧಾರೆಗಳ ಮೇಲೆ ವಿಶ್ವಾಸ ಇಟ್ಟು ಈ ಕಾರ್ಯಕ್ರಮದಲ್ಲಿ ಎಲ್ಲ ವಿಚಾರಗಳನ್ನು ಅಕ್ಷತರವರು ಮಂಡಿಸಿದ್ದಾರೆ. ಈ ದೇಶದಲ್ಲಿ ಜಾಸ್ತಿ ವ್ಯವಸ್ಥೆ ಜಾತಿ ವ್ಯವಸ್ಥೆಯನ್ನು ಹೊರಗೆ ಹೋಗಲಾಡಿಸಿಕೊಸ್ಕರ  ಬಾಬಾ ಸಾಹೇಬ್ ಕೊಟ್ಟಂತಹ ಒಂದು ಸಂವಿಧಾನ ಇಲ್ಲದೇ ಇದ್ದರೆ ಇವತ್ತು ಅಕ್ಷತಾರವರು ಇಲ್ಲಿ ಬಂದು ಮಾತನಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗುತ್ತಿತ್ತು. ಏನಾಗಿದೆ ಈ ದೇಶ, ಜಾತಿ ಧರ್ಮ, ಮತಗಳ ಮಧ್ಯ ವಿಷ ಬೀಜವನ್ನು ಬಿತ್ತಿ ಶಾಂತಿಯನ್ನು ಕದಡುವ ಪ್ರಯತ್ನವಾಗುತ್ತಿದೆ. ಒಬ್ಬ ಪರಿಶಿಷ್ಟ ಪಂಗಡದ ಮಹಿಳೆಯನ್ನು ರಾಷ್ಟ್ರಪತಿ ಯಾಗಿ ಮಾಡುವಂತ ಕೆಲಸಗಳು ಇವತ್ತು ಸಂವಿಧಾನದಿಂದ ಆಗಿದೆ.

ಈ ದೇಶಕ್ಕೆ ಕೊಟ್ಟಿದ್ದು ಸಂವಿಧಾನ ಏನ್ ನಮಗೆ ಭಗವದ್ಗೀತೆ ಗ್ರಂಥ ಬೈಬಲ್,ಕುರಾನ್, ನಮ್ಮ ಈ ಎಲ್ಲಾ ಗ್ರಂಥಗಳನ್ನು ಅಭ್ಯಾಸ ಮಾಡಿಕೊಂಡು ದೇಶ ಒಡೆಯುವರ ಮಾತುಗಳು ಕೇಳಿ ಬರುತ್ತಿವೆ. ಇದೇ ರೀತಿ ನಮ್ಮ ದೇಶ ಮುಂದುವರೆದರೆ ನಾವು ಸಹ ಯುದ್ಧಗಳನ್ನು ಎದುರಿಸಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಟಿ.ಡಿ ರಾಜೇಗೌಡರು ಮಾತನಾಡಿದರು.

ಈ ಸಂದರ್ಭದಲ್ಲಿ ನಾಗರಾಜ್, ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ, ಟಿ ಡಿ ರಾಜೇಗೌಡ್ರು, ಕುಮಾರ್ ಚಂದನ್, ಭೂದೇಶ್ ಕೆ ಆರ್, ನಿರ್ವಾಣಪ್ಪ, ಕೆ ಸಿ ಅಕ್ಷತಾ, ಸದಾಶಿವ, ಚಂದ್ರಮ್ಮ, ಅರುಣೇಶ್ ಗೌಡ್ರು, ನಟರಾಜ್ ಗೇರ್ಬೈಲ್, ಶಶಿಕಲಾ, ಜಮ್ಶೀದ್ ಅಹಮದ್, ಯಜ್ಞ ಪುರುಷ ಭಟ್, ಅನೀಫ್ , ಭೀಮ್ ಆರ್ಮಿ ಸದಸ್ಯರು ಹಾಗೂ ಕಾರ್ಯಕರ್ತರು,  ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

Scan the code