ಚುನಾವಣಾ ನಿರ್ವಹಣಾ ಸಮಿತಿಯ ಸಂಘಟನೆಯ ಕಾರ್ಯದಿಂದ ರಾಘವೇದ್ರ ಅವರಿಗೆ ಹೆಚ್ಚಿನ ಲೀಡ್ : ಪಾಣಿರಾಜಪ್ಪ
(SHIVAMOGA): ಸೊರಬ: ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಪರವಾದ ಚಿಂತನೆ ಹೊಂದಿರುವ ಬಿ.ವೈ. ರಾಘವೇಂದ್ರ ಅವರನ್ನು ಮತದಾರರು ಮತ್ತೊಮ್ಮೆ ಸಂಸದರನ್ನಾಗಿ ಆಯ್ಕೆ ಮಾಡಿರುವುದು ಬಿಜೆಪಿಗೆ ಸಂದ ಗೌರವವಾಗಿದೆ. ಇದಕ್ಕಾಗಿ ಮತದಾರರನ್ನು ಅಭಿನಂದಿಸುವುದಾಗಿ ಸೊರಬ ತಾಲೂಕು ಚುನಾವಣೆ ನಿರ್ವಹಣಾ ಸಮಿತಿ ಅಧ್ಯಕ್ಷ ಪಾಣಿರಾಜಪ್ಪ ಹೇಳಿದರು.
ಪಟ್ಟಣದ ಗಿರಿಜಾಶಂಕರ ಭವನದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಸಂಸದರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲು ದೇಶದಲ್ಲಿ ಪುನಃ ನರೇಂದ್ರ ಮೋದಿಯವರ ಆಡಳಿತವೇ ಬೇಕು ಎಂದು ಮತದಾರರು ನಂಬಿಕೆಯಿಟ್ಟು ಈ ಬಾರಿ ಮತ ಚಲಾಯಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಆದ ಅಭಿವೃದ್ಧಿ ಕಾರ್ಯಗಳು, ಬದಲಾವಣೆ ವಿಶ್ವದಲ್ಲಿ ಭಾರತಕ್ಕೆ ದೊರೆತ ಅತ್ಯುನ್ನತ ಗೌರವವನ್ನು ಗಮನಿಸಿದ ಜನತೆ ಈ ಬಾರಿಯು ಸಹ ಸ್ಥಿರ ಸರ್ಕಾರ ಬೇಕು ಎಂಬ ಆತ್ಮ ವಿಶ್ವಾಸದೊಂದಿಗೆ ಎನ್ಡಿಎ ಮೈತ್ರಿಕೂಟಕ್ಕೆ ಜನಾದೇಶ ನೀಡಿದ್ದಾರೆ. ತಾಲ್ಲೂಕಿನಲ್ಲಿ ಚುನಾವಣೆ ನಿರ್ವಹಣಾ ಸಮಿತಿಯು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು 18ಸಾವಿರ ಮತಗಳ ಲೀಡ್ ಪಡೆಯಲು ಸಾಧ್ಯವಾಗಿದೆ.
ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಜನರ ವಿಶ್ವಾಸ ಗಳಿಸದ ಪರಿಣಾಮ ಸೋತಿದ್ದರು. 40 ಸಾವಿರಕ್ಕೂ ಅಧಿಕ ಮತಗಳ ಅಂತರದಿ0ದ ಗೆದ್ದ ಮಧು ಬಂಗಾರಪ್ಪ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಕಾರಣ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗಿದೆ. ರಾಘವೇಂದ್ರ ಅವರ ಗೆಲುವಿನೊಂದಿಗೆ ತಾಲ್ಲೂಕಿನಲ್ಲಿ ಮತ್ತೊಮ್ಮೆ ಬಿಜೆಪಿ ಶಕ್ತಿಯುತವಾಗಿ ಬೆಳೆಯಲಿದೆ ಎಂದರು.
ಕುಮಾರ್ ಬಂಗಾರಪ್ಪನವರ ಮನಸ್ಥಿತಿ ವಿರುದ್ಧ ನಮ್ಮ ಹೋರಾಟ:
ಮುಖಂಡ ಎಂ.ಕೆ ಯೋಗೇಶ್ ಮಾತನಾಡಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ವಿಧಾನಸಭಾ ಚುನಾವಣೆ ಬಳಿಕ ಒಂದು ವರ್ಷದಿಂದ ಕಾರ್ಯಕರ್ತರ ಕಷ್ಟ, ನೋವುಗಳಿಗೆ ಯಾವುದೇ ರೀತಿಯಲ್ಲಿಯೂ ಸ್ಪಂದಿಸಿಲ್ಲ. ಲೋಕಸಭಾ ಚುನಾವಣೆ ಕೆಲವು ದಿನ ಬಾಕಿ ಇರುವಾಗ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಕೇವಲ ತಮ್ಮ ಸ್ವಾರ್ಥವನ್ನು ಬಯಸುವ ಇವರು ಕಾಂಗ್ರೆಸ್ನಿAದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ಗಾಗಿ ಹಂಬಲಿಸುತ್ತಿದ್ದ ಅವರಿಗೆ ಮಧು ಬಂಗಾರಪ್ಪ ಅಡ್ಡಿಪಡಿಸಿದ್ದರಿಂದ ಬೇರೆ ದಾರಿ ಇಲ್ಲದೆ ಬಿಜೆಪಿಯಲ್ಲಿದ್ದಾರೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾದ ನಾವು ಎಸ್.ಕುಮಾರ್ ಬಂಗಾರಪ್ಪನವರ ಮನಸ್ಥಿತಿಯ ವಿರುದ್ಧ ನಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದರು.
ಪ್ರಮುಖರಾದ ಎ.ಎಲ್. ಅರವಿಂದ್, ಗಜಾನನರಾವ್, ದಿವಾಕರ ಭಾವೆ, ಗುರುಪ್ರಸನ್ನಗೌಡ, ಅಶೋಕ ನಾಯಕ ಅಂಡಿಗೆ, ರಾಜಶೇಖರ ಗಾಳಿಪುರ, ವಿಜೇಂದ್ರಗೌಡ ತಲಗುಂದ, ರಾಜುಗೌಡ, ಅರುಣ್ ಪುಟ್ಟನಹಳಿ, ಸುರೇಶ್ ಎಸ್.ಎನ್.ಕೊಪ್ಪ, ಬರಗಿ ಚಂದ್ರಣ್ಣ, ಬೆನವಪ್ಪ, ನಿಂಗಪ್ಪ, ಗಣಪತಿ ಕಪ್ಪಗಳಲೆ, ಸಂಜೀವಾಚಾರಿ, ನಿಂಗಪ್ಪ, ಮೊದಲಾದವರು ಇದ್ದರು.
ವರದಿ: ಸಂದೀಪ ಯು.ಎಲ್ ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ